Thursday 26 September 2019

“ನನ್ನ ಮಗಳ ಮದುವೆ ಯಾವಾಗ ಆಗುತ್ತದೆ…?”

     ಕಳದ ಶನಿವಾರ ಬೆಂಗಳೂರಿನಿಂದ ಒಬ್ಬ ತಾಯಿ ತನ್ನ ಮಗಳ ಮದುವೆಗಾಗಿ ಜಾತಕವನ್ನು ತೋರಿಸುವುದಕ್ಕೆ ಬಂದಿದ್ದರು.


ತಾಯಿ: “ನನ್ನ ಮಗಳು ಭಾರತದಲ್ಲಿ BE ಮಾಡಿ, ಅಮೇರಿಕದಲ್ಲಿ MS ಮಾಡಿ ಕಳದ ಎಂಟು ವರ್ಷಗಳಿಂದ ಅಮೆರಿಕದಲ್ಲೇ ಉದ್ಯೋಗವನ್ನು ಮಾಡುತ್ತಿದ್ದಾಳೆ. ಕಳದ ಐದು ವರ್ಷಗಳಿಂದ ನನ್ನಮಗಳಿಗಾಗಿ ಮದುವೆಯ ಸಂಭಂದಗಳನ್ನು ನೋಡುತ್ತಿದ್ದೇವೆ. ಆದರೇ ಯಾವ ಸಂಭಂದವೂ ಮುಂದುವರೆಯುತ್ತಿಲ್ಲ”. ಅಂತ ತನ್ನ ಪ್ರಶ್ನೆಯನ್ನು ಪರಿಚಯಮಾಡಿಕೊಂಡರು. ತನ್ನ ಮಗಳ ಜಾತಕವನ್ನು ಕೊಟ್ಟರು.


     ನಾನು ಅವರ ಕೊಟ್ಟ ಜಾತಕವನ್ನು ನೋಡಲಾರಂಬಿಸಿದೆ. ವಿವಾಹ ವಿಷಯದಲ್ಲಿ ಜಾತಕದಲ್ಲಿರುವ ಗ್ರಹಸ್ಥಿತಿ ಚೆನ್ನಾಗಿದೆ. ನಡೆಯುತ್ತಿರುವ ದಶೆ, ಗೋಚಾರ ಮತ್ತು ಗುರುಭಲ ಎಲ್ಲವೂ ಅನುಕೂಲವಾಗಿದೆ. ಅವರು ಕೇಳುವ ಪ್ರಶ್ನೆಗು ಜಾತಕ ಫಲಕ್ಕು ಹೊಂದಾಣೀಕೆ ಆಗುತ್ತಿಲ್ಲ ಅಂತ ತಿಳಿದು ಮತ್ತಿಷ್ಟು ಆಳವಾಗಿ ಜಾತಕವನ್ನು ನೋಡಲಾರಂಬಿಸಿದೆ. ಅಷ್ಟಕವರ್ಗ, ಗುರುಭಲ “ವೇದ” ಗೆ ಒಳಗಾಗಿದೆಯಾ, ಗುರು ಮತ್ತು ಶನಿ ಯಿರುವ ಕಕ್ಷ್ಣೆ ಏನಾಗಿದೆ…. ಮೊದಲಾದ ಹೆಚ್ಚಿನ ಪರಿಶೀಲನೆಯನ್ನು ಮಾಡಿದೆ. ಕೊನೆಗೂ ವಿವಾಹವು ಆಗದೇ ಇರುವುದಕ್ಕೆ ಸರಿಯಾದ ಕಾರಣೆ ಕಾಣಿಸಲಿಲ್ಲ.


ನಾನು: “ನಿಮ್ಮ ಮಗಳ ಜಾತಕವು ಚೆನ್ನಾಗಿದೆ. ವಿವಾಹವನ್ನು ತಡಮಾಡುವ ಯಾವ ದೋಷವು ಕಾಣಿಸುತ್ತಿಲ್ಲ. ಈಗ ಗುರುಭಲ ಯಿದೆ, ನಡೆಯುತ್ತಿರುವ ದಶೆ ಸಹಿತ ಚೆನ್ನಾಗಿದೆ”. ನಿಮ್ಮ ಮಗಳಿಗೆ ಖಂಡಿತವಾಗಿಯೂ ಮದುವೆಯು ಆಗುತ್ತದೆ. ಚಿಂತಿಸಬೇಡಿ” ಅಂತ ತಿಳಿಸಿದೆ.


ತಾಯಿ:“ಆಚಾರ್ಯರೇ! ಕಳದ ಐದು ವರ್ಷಗಳಿಂದಲೂ ಇದನ್ನೇ ಕೇಳುತ್ತಿದ್ದೇನೆ. ಎಲ್ಲ ಜ್ಯೋತಿಷರು ಇದೇತರ ಹೇಳುತ್ತಿದ್ದಾರೆ. ಗುರುಭಲ ಯಿದೆ ಆಗುತ್ತದೆ ಯೆನ್ನುತ್ತಾರೆ. ಕೆಲವಿನ ಸಮಯದಲ್ಲಿ ಗುರುಭಲ ಯಿಲ್ಲ, ಶಾಂತಿಯನ್ನು ಮಾಡಿಸಿ ಮತ್ತು ಸ್ವಯಂವರ ಪಾರ್ವತಿ ಹೋಮವನ್ನು ಮಾಡಿಸಿ” ಅಂತ ತಿಳಿಸುತಿದ್ದಾರೆ. ನಾವು ಎಲ್ಲ ಜ್ಯೋತಿಷರು ಹೇಳಿದ್ದನ್ನು ಮಾಡಿಸಿದ್ದೀವಿ. ಕೊಕ್ಕೆ ಸುಭ್ರಮಣ್ಯ, ಮಂತ್ರಾಲಯ, ತಿರುಪತಿ ಮತ್ತು ಶ್ರೀಕಾಳಹಸ್ತಿ” ಮೊದಲಾದ ಕ್ಷೇತ್ರದರ್ಶನಮಾಡಿದ್ದೀವಿ. ಜ್ಯೋತಿಷರು ತಿಳಿಸಿದ ಸ್ವಯಂವರ ಪಾರ್ವತೀ ಮಂತ್ರ ಜಪ-ಹೋಮಗಳೆಲ್ಲವನ್ನೂ ಮಾಡಿಸಿದ್ದೀವಿ”. ನಮ್ಮ ಮನೆಯಲ್ಲಿ ರುಕ್ಮಿಣೀ ಕಳ್ಯಾಣ ಮಾಡಿಸಿದ್ದೀವಿ. ಹೆಚ್ಚಿನ ಧಾನ ಧರ್ಮಗಳನ್ನು ಮಾಡುತ್ತಿದ್ದೀವಿ. ಕಳದ ಐದು ವರ್ಷಗಳಿಂದ ಸತತವಾಗಿ ವಿವಾಹ ಪ್ರಯತ್ನವನ್ನು ಮಾಡಿದರೂ ಕೂಡಿಬರುತ್ತಿಲ್ಲ. ನಮ್ಮ ಮಗಳ ಜಾತಕದಲ್ಲಿ ಕಳ್ಯಾಣಯೋಗ ಇದೆಯಾ? ಇದ್ದರೇ ಯೇಕೆ ವಿವಾಹವಾಗುತ್ತಿಲ್ಲ?” ಅಂತ ಆ ತಾಯಿ ಪ್ರಶ್ನೆಮಾಡಿದರು


     ಕೆಲವೊಮ್ಮೆ ಜಾತಕ, ವಿವಾಹ ಭಲ ಕೂಡಿಬಂದರೂ ತಾವೇ ಬೇಡಯೆನ್ನುವ ಸಂಧರ್ಭವೂ ಇದೆ. ಅದೇನೆಂದರೆ ವಿವಾಹಸಮಯದಲ್ಲಿ ಅವರಿಗೆ ತಕ್ಕಂತೆ ಸಂಭಂದ ಬಂದಿಲ್ಲವೆಂದು ಉತ್ಸಾಹತೋರಿಸದೇ ಇರುವುದೂ ಇದೆ. ಬಹಳಾ ಸೋಚನೀಯವಾದ ವಿಚಾರ. ಇತ್ಯೀಚ್ಚಿಗೆ ಇದು ಬಹಳಾ ಹೆಚ್ಚಾಗುತ್ತಿದೆ. ಪ್ರಾಚೀನ ಕಾಲದಲ್ಲಿ(50 ವರ್ಷಕ್ಕೂ ಹಿಂದೆ) ಹುಡ್ಗಿ ಮತ್ತು ಹುಡ್ಗನ ಕಡೆ ತಾಯಿತಂದೆ ವಿವಾಹಸಮ್ಮತವನ್ನು ಮಾಡಿ ಜ್ಯೋತಿಷನ ಹತ್ತರ ಹೋಗಿ ಕೇಳುತ್ತಿದ್ದರು. ವಿವಾಹ ಹೊಂದಾಣಿಕೆ ಆಗುತ್ತಿದೆ ಅಂತ ಜ್ಯೋತಿಷ ಹೇಳಿದರೇ ವಿವಾಹಕ್ಕೆ ಯಾವ ಭಂದಕವು ಇರುತಿದ್ದಿಲ್ಲ. ಹೊಂದಾಣಿಕೆ ಆಗಲಿಲ್ಲದ ಪಕ್ಷದಲ್ಲಿ ಮುಂದುವರಿಯುತಿದ್ದಿಲ್ಲ.




     ಹೊಂದಾಣಿಕೆ ನೋಡುವ ಉದ್ದೇಶವೇನೆಂದರೇ “ಭಗವಂತ ಈ ವಿವಾಹವನ್ನು ಅಂಗೀಕರಿಸುತಿದ್ದಾನೆ” ಯೆನ್ನುವ ನಂಬಿಕೆ. ಇದು ಶಾಸ್ತ್ರದ ಮುಖಾಂತರವಾಗಿ ಆಗುವುದು. ಈ ಅತ್ಯಾಧುನಿಕೆ ಕಾಲದಲ್ಲಿ ಈ ಪದ್ದತಿಯು ಯಿಲ್ಲವಾಗಿದೆ. ವಿವಾಹ ಪರಿಚಯವೇದಿಕೆ ಅಥವ ಮಠಗಳಿಗೆ ಹೋಗಿ ವಿವಾಹಕ್ಕಾಗಿ ನೊಂದಣೆಮಾಡಿದ ಪುಸ್ತಕಗಳನ್ನು ನೋಡಿ, ತಾವು ಬಯಸಿದ ಸಂಭಂದಗಳನ್ನು ತೆಗದುಕೊಂಡು ಜ್ಯೋತಿಷರಬಳಿಹೋಗುತ್ತಾರೆ. ಜ್ಯೋತಿಷನು ವಿವಾಹಕ್ಕೆ ಹೊಂದಾಣಿಕೆ ಆಗಿದೆ ಅಂತ ಒಪ್ಪಿಗೆ ಕೊಟ್ಟನಂತರ ಹುಡ್ಗ ಮತ್ತು ಹುಡ್ಗಿ ಆಯ್ಕೆ ಪ್ರಾರಂಭವಾಗುತ್ತದೆ. ಒಂದುವೇಳೆ ಜಾತಕ ಸಮ್ಮತವಾಗಿದ್ದರೂ ಹುಡ್ಗ-ಹುಡ್ಗಿ ಗೆ ಸಮ್ಮತವಾಗಲಿಲ್ಲದ ಪಕ್ಷದಲ್ಲಿ ಸಂಭಂದ ಮುಂದುವರೆಯುವುದಿಲ್ಲ. ಹೀಗಾಗಿ ಜಾತಕ ಚೆನ್ನಾಗಿದ್ದು, ಗ್ರಹಭಲ ಕೂಡಿಬಂದರೂ ವಿವಾಹಗಳು ಆಗುತ್ತಿಲ್ಲ. ಭಗವಂತ ಶಾಸ್ತ್ರದ ಮೂಲಕ ಸಮ್ಮತವನ್ನು ಕೊಟ್ಟರೂ ಇವರಿಗೆ ಬೇಕಾದ ರೀತಿಯಲ್ಲಿ ಹುಡ್ಗ ಅತವ ಹುಡ್ಗಿ ಇರುವುದಿಲ್ಲ ಕಾರಣ ಮದುವೆಯ ಪ್ರಯತ್ನ ಮುಂದುವರೆಯುವುದಿಲ್ಲ.


ನಾನು ಕೇಳಿದೆ:  “ನೀವು ಎಂತಹ ಹುಡ್ಗನನ್ನು ನೋಡುತ್ತಿದ್ದೀರಿ?”


ತಾಯಿ: “ನಮಗೆ ಪ್ರತ್ಯೇಕವಾದ Requirements ಏನು ಇಲ್ಲ. ಆದರೇ ನಮ್ಮ ಹುಡ್ಗಿ ಇಷ್ಟಪಡಲು ಕೆಲವಿನ ವಿಚಾರವನ್ನು ಮುಂದುವರಿಸುತ್ತಿದ್ದೇವೆ”

  1. ನನ್ನ ಮಗಳು ಅಮೆರಿಕಾದಲ್ಲಿ ಗೂಗುಲ್ ಕಂಪೆನಿಯಲ್ಲಿ ಉದ್ಯೋಗಮಾಡುತ್ತಿದ್ದಾಳೆ. ಹಾಗಾಗಿ ಹುಡ್ಗನೂ ಸಹ ಮೈಕ್ರೋಸಾಫ್ಟ್, ಇನ್ಫೋಸಿಸ್, ಫೇಸ್ಬುಕ್, ಪೇಪಾಲ್ ಅಥವ ಗೂಗುಲ್.. ಮೊದಲಾದಂತಹ ದೊಡ್ಡ ಕಂಪೆನಿಗಲಲ್ಲಿ ಉದ್ಯೋಗ ಮಾಡುತ್ತಿರಬೇಕು ಮತ್ತು ಅಮೆರಿಕಾದಲ್ಲೇ ಇರಬೇಕು.
  2. ಹುಡ್ಗನ ತಂದೆತಾಯಿ ಭಾರತದಲ್ಲೇ ಇರಬೇಕು. ಅವರು ವೊಳ್ಲೆಯ ಸ್ಥಿತಿಯಲ್ಲಿರಬೇಕು. ಭಾರತದಲ್ಲಿ ಸ್ವಂತವಾದಂತಹ ಮನೆ ಯಿರಬೇಕು.
  3. ಸಂಬಳ (Salary) ತಿಂಗಳಿಗೆ 150K-200K ಇರಬೇಕು  (in Indian currency) .
  4. ನೋಡುವುದಕ್ಕೆ ಚೆನ್ನಾಗಿರಬೇಕು(Handsome). ನನ್ನ ಮಗಳು ಎತ್ತರ 4.8″ ಇದ್ದಳೆ. ನನ್ನಮಗಳಿಗೆ 5 ರಿಂದ 6″ ಎತ್ತರದ ಹುಡ ಬೇಕು.
  5. ನಮ್ಮ ಶಾಖೆಯೇ ಆಗಿರಬೇಕು. ಬೇರೇ ಶಾಖೆ ಬೇಡ. 
  6. ನನ್ನ ಜೀವನದಲ್ಲಿ(ತಾಯಿ) ಹೆಣ್ಣುಮಕ್ಕಳ ಕಾಟ ಬಹಳ ಅನುಭವಿಸಿದ್ದೀನಿ. ನನ್ನ ಮಗಳಿಗೆ ಆತರ ತೊಂದರೆಗಳು ಇರಬಾರದು. ಹೆಣ್ಣುಮಕ್ಕಳಿಲ್ಲದ ಮನೆ ಆಗಿರಬೇಕು.
  7. ಹುಡ್ಗನ ತಂದೆತಾಯಿಗಳು ಭಾರತದಲ್ಲೇ ಇರಬೇಕು. ವರ್ಷಕ್ಕೆ ಒಮ್ಮೆ ಬಂದು ಮನೆಯಲ್ಲಿ ತಿಷ್ಟೆ ಹಾಕಬಾರದು.
  8. ಮಗನಿಂದ ಹಣವನ್ನು ಬಯಸಬಾರದು. ನಾವು ಹಣವನ್ನು ಹೇಗೆ ಖರ್ಚುಮಾಡುವುದರಬಗ್ಗೆ ಹೆಚ್ಚಿನ ಯೋಚನೆಮಾಡಬಾರದು.
  9. ಹುಡ್ಗನಿಗೆ ಸಿಗಿರೇಟ್ ಹವ್ಯಾಸ ಇರಬಾರದು. ನನ್ನ ಮಗಳಿಗೆ ಸಿಗಿರೇಟ್ ವಾಸನಿ ಆಗುವುದಿಲ್ಲ. ಸೋಷಲ್ ಡ್ರಿಂಕಿಂಗ್ ಕೂಡಾ ನನ್ನ ಮಗಳಿಗೆ ಇಷ್ಟ ಆಗೋಲ್ಲ.
  10. ಹುಡ್ಗನಿಗೆ ಹೆಚ್ಚು ಸ್ನೆಹಿತರು ಇರಬಾರದು. ವೀಕೆಂಡ್ ಪಾರ್ಟೀ ಗಳಿಗೆ ಹೋಗಬಾರದು. ಎಲ್ಲಿಗೆ ಹೋದರೂ ನನ್ನ ಮಗಳನ್ನು ಕರ್ಕೊಂಡು ಹೋಗಬೇಕು.

ನಾನು: “ಇಷ್ಟು Requirements ಇರುವ ಹುಡ್ಗ ಸಿಗಬೇಕಾದರೇ ಬಹು ಪ್ರಯತ್ನಮಾಡಬೇಕು. ಆದರೂ ಸಿಗುತ್ತಾನೆ ಅಂತ ಬರೋಸೆ ಇಲ್ಲ. ಹೆಚ್ಚಿನ ಕಾಲ ಕಾಯಬೇಕಾಗುತ್ತದೆ”.


ತಾಯಿ: ಮೇಲೆ ತಿಳಿಸಿದ Requirements ಇರುವವರನ್ನೇ ನೋಡುತ್ತಿದ್ದೀವಿ ಆಚಾರ್ಯರೆ. ನಾವೇನು ಬೇರೆ ಜನರತರ ಹೆಚ್ಚು ಬಯಸುತ್ತಿಲ್ಲ. ನನ್ನ ಮಗಳ ವಿವಾಹ ಶೀಘ್ರದಲ್ಲಿ ಆಗುವುದಕ್ಕೆ ಯಾವುದಾದರೂ ಹೋಮ, ಪೂಜೆ ಮತ್ತು ಪಠಿಸಬೇಕಾದ ಮಂತ್ರವನ್ನು ತಿಳಿಸಿ ಆಚಾರ್ಯರೆ.


ನಾನು: ” ನಿಮ್ಮ ಮಗಳ ಶೀಘ್ರವಿವಾಹಕ್ಕಾಗಿ ಭಗವಂತನನ್ನು ನಿತ್ಯ ಪ್ರಾರ್ಥನೆಮಾಡಿ.ನಿಮ್ಮ ಮಗಳನ್ನು ನಿತ್ಯ ಸ್ವಯಂವರ ಪಾರ್ವತಿ ಮಂತ್ರವನ್ನು ಪಾರಾಯಣ ಮಾಡುವುದಕ್ಕೆ ತಿಳಿಸಿ.  ನಿಮ್ಮ ಮಗಳನ್ನು ಗುರುವಾರ  ಗುರುಗಳ ಗುಡಿ/ಮಠಕ್ಕೆ ಹೋಗಿ ಮನಃಪೂರ್ವಕವಾಗಿ ಪ್ರಾರ್ಥನೆಮಾಡಿ ತುಪ್ಪದಿಂದ ದೀಪ ಹಚ್ಚುವುದಕ್ಕೆ ತಿಳಿಸಿ. ಗುರುಗಳ ಕರುಣೆಯಿದ್ದಲ್ಲಿ ನಿಮ್ಮ ಮಗಳ ಭಕ್ತಿಗೆ ಮೆಚ್ಚಿ ಅನುಗ್ರಹಿಸಬಹುದು”.


ತಾಯಿ: ನನ್ನಮಗಳಿಗೆ ಗುಡಿ/ಮಠ/ಮಂತ್ರ ಪಾರಾಯಣದ ಮೇಲೆ Interest ಇಲ್ಲ. ಅವಳಿಗೆ ಮಾಡುವುದಕ್ಕೆ ಪುರುಸೊತ್ತು ಕೂಡಾ ಇರುವುದಿಲ್ಲ. ಅವಳಪರವಾಗಿ ನಾನು ಮಾಡಬಹುದೇ?. ಅವಳಿಗಾಗಿ ನಾನು ನಿತ್ಯ ರುಕ್ಮಿಣೀ ಕಳ್ಯಾಣ ವೋದುತ್ತಿದ್ದೀನಿ. ಅವಳಿಗಾಗಿ ಎಲ್ಲ ತೀರ್ಥ ಕ್ಷೇತ್ರಗಳನ್ನು ದರ್ಶನಮಾಡುತ್ತಿದ್ದೇನೆ” ಆದರೂ ಯಾಕೋ ಭಗವಂತ ಮನಸುಮಾಡುತ್ತಿಲ್ಲ.”


     ಮೇಲಿನ ವಿಚಾರ ಆಲೋಚನೆಮಾಡಿದರೆ ವಿವಾಹಕ್ಕಾಗಿ ಮತ್ತು ಮಗಳ ಪರವಾಗಿ ಇವರು ಪೂಜೆ/ಪಾರಾಯಣ/ಕ್ಷೇತ್ರದರ್ಶನ ಮಾಡಿದರೇ ಏನು ಫಲ..! ಹೊಟ್ಟೆನೋವಿದ್ದವರೂ ಮಾತ್ರವೇ ಗುಳಿಗೆ ನುಂಗಬೇಕಲ್ವೇ! ಮಂತ್ರದ ಅರ್ಥ ಗೊತ್ತಿಲ್ಲದೇ ಜಪ/ಪಾರಾಯಣ ಮಾಡುತ್ತಿದ್ದಾರೆ. ಸ್ಥಳ ಮಹಿಮಿಗೊತ್ತಿಲ್ಲದೇ ತೀರ್ಥಕ್ಷೇತ್ರದ ದರ್ಶನಮಾಡುತ್ತಿದ್ದಾರೆ. ಎಷ್ಟು ಮಾಡಿದರೂ ತಾವು ಬಯಸಿದ ಹುಡ್ಗನು ಸಿಗುವುದಕ್ಕೆ ಅವಕಾಶಗಳೇ ಕಡಿಮೆ ಯಿದೆ. ಏಕೆಂದರೇ ಇವರು ಬಯಸುವ ಎಲ್ಲ ಲಕ್ಷಣಗಳು ಒಬ್ಬ ಹುಡ್ಗನಲ್ಲಿ ಹೊಂದಿರುವುದು ಹೇಗೆ ಸಾಧ್ಯ. ವಿವಾಹವು ತಡವಾಗುವುದಕ್ಕೆ ಇವರ ಬಯಕೆಗಳೇ ಕಾರಣ. ಜಾತಕ ಮತ್ತು ಭಗವಂತ ಕಾರಣವೇ ಅಲ್ಲ”. ವಿವಾಹ ತಡವಾಗುವುದಕ್ಕೆ ಕೆಲವೊಮ್ಮೆ ಪ್ರಾಚೀನ ಕರ್ಮ ಕಾರಣವಾಗುತ್ತದೆ. ಇದನ್ನು ಜಾತಕದಲ್ಲಿ ಗುರ್ತಿಸಬಹುದು. ಕೆಲವೊಮ್ಮೆ ವಿವಾಹ ಸ್ವಯಂಕೃತಾಪರಾದದಿಂದ ತಡವಾಗುತ್ತದೆ. ಇದನ್ನು ಜಾತಕಮುಕಾಂತರ ತಿಳಿಯುವುದು ಕಷ್ಟ. ಅವರ ಮನಸ್ಸು ಮತ್ತೆ ಬಯಸುವ ವಿಚಾರವನ್ನು ಪರಿಶೀಲನೆಮಾಡಬೇಕಾಗುತ್ತದೆ.

    
     ಮೇಲಿನತರಹದ ವಿವಾಹಪ್ರಶ್ನೆಯನ್ನು ನೋಡುವುದು ನನಗಿದೇನು ಮೊದಲಬಾರಿ ಅಲ್ಲ. ಇವತ್ತಿನ ದಿನಗಳಲ್ಲಿ ಬಹಳಷ್ಟು ಜನರು ಬಯಸುವುದು/ಕೇಳುವುದು ಇದೇತರ ಇದೆ. ಇದೇತರ ಮುಂದುವರಿತಾಹೋದರೆ ವಿವಾಹವು ಆಗುವುದು ಆಲಸ್ಯವಾಗುತ್ತದೆ. ವಯಸ್ಸು ಮೀರುತ್ತಿದ್ದಷ್ಟು ಅವರು ಬಯಸುವ ಲಕ್ಷಣಗಳನ್ನೂ ಸಹಾ ಒಂದೊಂದನ್ನು ಬಿಡಬೇಕಾಗುತ್ತದೆ. ಎಲ್ಲೋ ಒಂದು ಕಡೆ ಹುಡ್ಗ/ಹುಡ್ಗಿ ಆಯ್ಕೆ ವಿಷಯದಲ್ಲಿ ರಾಜಿ ಆಗಬೇಕಾಗುತ್ತದೆ. ಇಲ್ಲದ ಪಕ್ಷದಲ್ಲಿ ಕೊನೆಗೆ ಬಯಸುವುದು ಒಂದೇ ಉಳಿಯುತ್ತದೆ. ಅದೇನಂದರೇ “ನನ್ನ ಮಗಳಿಗೆ ಯಾವುದಾದರೂ ಗಂಡು/ಹೆಣ್ಣು ಸಿಕ್ಕರೇ ಸಾಕು” ಅಂತ. ಆ ಸಮಯದಲ್ಲಿ ವಯಸ್ಸು ಬಹಳಾ ಆಗಿ ಹೋಗಿರುತ್ತದೆ. ವೈವಾಹಿಕ ಜೀವನದಮೇಲೆ, ಭಂದುಬಳಗದಮೇಲೆ  ಮತ್ತು ಭಗವಂತನಮೇಲೆ ಉತ್ಸಾಹವೂ ಕಳದುಕೊಂಡಿರುತ್ತಾರೆ.


ಸಂತೋಷಜೀವನಕ್ಕಾಗಿ ವಿವಾಹವಿಷಯದಲ್ಲಿ ಮುಖ್ಯವಾಗಿ ನೋಡಬೇದಂತದ್ದೇನು ಅಂದರೇ

  1. ಹುಡ್ಗ/ಹುಡ್ಗಿ ಮನಸ್ಸು ಚೆನ್ನಾಗಿರಬೇಕು. ಹೊಂದುಕೊಂಡು ಹೋಗುವಂತ ಸ್ಥಿತಿ ಯಿರಬೇಕು. ಇದು ಇದ್ದಲ್ಲಿ ಮಾತ್ರವೇ ಮನೆ ಜನರ ಜೊತೆ ಮತ್ತು ಬಂದುಬಳಗರ ಜೊತೆ ಸಂತೋಷವಗಿರಲು ಸಾಧ್ಯವಾಗುತ್ತದೆ.
  2. ನೋಡುವುದಕ್ಕೆ ಚೆನ್ನಾಗಿರಬೇಕು ಅಂದರೇ ನಾವು ಆಯ್ಕೆ ಮಾಡುವವರು ತನ್ನ ಮಗ/ಮಗಳಿಗೆ ಮಾತ್ರ ಚೆನ್ನ ಅಂತೆನಿಸಬೇಕು. ಬೇರೆ ಅವರಿಗಲ್ಲ. ನೋಡಿದವರೆಲ್ಲರೂ “ಚೆನ್ನಾಗಿದ್ದಾಳೆ/ಚೆನ್ನಾಗಿದ್ದಾನೆ” ಯೆನಿಸುವ ಹುಡ್ಗ/ಹುಡ್ಗಿ ಬೇಕು ಯೆನ್ನುವ ವಿಷಯದಲ್ಲಿ ಅರ್ಥವಿಲ್ಲ. ಅದು ಮುಂದೆ ನೋವನ್ನು ಕೊಡುತ್ತದೆ.
  3. ಹಣ ಇದ್ರು/ಇಲ್ಲದೇ ಇದ್ರು ಹೊಂದುಕೊಂಡು ಹೋಗುವಂತಹ ತಾಳ್ಮೆಯಿರಬೇಕು. ಜೀವನದಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತದೆ. ಕಷ್ಟ ಬಾರದೇ ಇರುವುದು ಸಾಧ್ಯವೇ ಇಲ್ಲ. ಕೇವಲ ಸುಖಕ್ಕೆ ಬೇಕಾದ ವಿಷಯಗಳನ್ನು ಮಾತ್ರ ನೋಡಿದರೇ, ದುಃಖಬಂದಾಗ ತಾಳ್ಮೆ ಯಿಲ್ಲದೇ ಇದ್ರೆ, ಜೀವನ ನರಕಪ್ರಾಯವಾಗುತ್ತದೆ. ವೈವಾಹಿಕ ಜೀವನ ನಡಿಸುವುದಕ್ಕೆ ಅತಿ ಮುಖ್ಯವಾದದ್ದು ಹಣ, ಉದ್ಯೋಗ, ಆಸ್ತಿಪಾಸ್ತಿಗಳಲ್ಲ. ವಿಶ್ವಾಸ ಇರಬೇಕು. ಇಬ್ಬರಮದ್ಯ ಅಪಾರವಾದ ನಂಬಿಕೆ ಇರಬೇಕು. ಈ ನಂಬಿಕೆ ಇಲ್ಲದ ದಿನ ವೈವಾಹಿಕ ಜೀವನ ವಿಚ್ಚಿನ್ನವಾಗುತ್ತದೆ.
  4. ಸುಖ, ಹಣ, ಭೋಗ ಇವುಗಳ ಇದ್ದಾಗ ಮಾತ್ರ ಪ್ರೀತಿಸುವುದಲ್ಲ. ಸಹಜವಾಗಿ ಪ್ರೀತಿಸುವ ಹುಡ್ಗ/ಹುಡ್ಗಿಗಾಗಿ ಬಯಸಬೇಕು. ಇಂತಹಪ್ರೀತಿಯನ್ನೇ “ಅಂದ” ಅಂತ ಕರೆಯುತ್ತಾರೆ. ಇದು ಒಳಗಿನ ಅಂದ ಮತ್ತು ಆನಂದ. “ಅಂದ” ವೆನ್ನುವುದು ಹೊರಗೆ ತೋರ್ಪಡುವುದು ಅಲ್ಲ. ಹೊರಗೆ ತೋರ್ಪಡುವ “ಅಂದ” ಎಲ್ಲರಲ್ಲಿ ಮೋಹವನ್ನುಂಟುಮಾಡುತ್ತದೆ. ಒಳಗಿನ ಅಂದ ಹುಡ್ಗ/ಹುಡ್ಗಿ ಯರಲ್ಲಿ ಪ್ರೀತಿಯನ್ನು ಉಂಟುಮಾಡುತ್ತದೆ.
  5. ಮನುಷ್ಯನ ಜೀವನದಲ್ಲಿ ಈ ಕ್ಷಣ ಇದ್ದದ್ದು ಮತ್ತೊಂದು ಕ್ಷಣ ಇಲ್ಲದೇ ಹೋಗಬಹುದು. ಈ ಕ್ಷಣ ಇಲ್ಲವಾದದ್ದನ್ನು ಮುಂದೆ ಪಡಿಬಹುದು. ಇಂತಹ ತಾತ್ಕಾಲಿಕವಾದ ಹಣ, ಐಶ್ವರ್ಯ, ಅಧಿಕಾರ, ಉದ್ಯೋಗಗಳನ್ನು ಬಯಸುವುದು ಮೂರ್ಖತ್ವ. ಇದು ನಮ್ಮ ಸನಾತನ ಸಾಂಪ್ರದಾಯವಲ್ಲ.

     ಮೇಲೆ ತಿಳಿಸಿರುವ ಗುಣಗಳು(ಬಯಸಬೇಕಾದ) ಇದೆಯೋ ಅಥವ ಇಲ್ಲವೋ ಯೆನ್ನುವ ವಿಚಾರ ಜಾತಕವನ್ನು ನೋಡುವಾಗ ಅರಿವಾಗುತ್ತದೆ. ಆದರೆ ಇವತ್ತಿನ ಸಮಾಜ ಈ ಲಕ್ಷಣಗಳನ್ನು ಬಯಸುವ ಜನರೇ ಇಲ್ಲವಾಗಿದೆ. ಹಾಗಾಗಿ ಜ್ಯೋತಿಷರಿಗೆ ಕೂಡಾ ಈತರನೋಡುವುದು ವ್ಯರ್ಥ ಅಂತಾಗಿದೆ. ಕೇವಲ ಜನರು ಬಯಸುವ ಲಕ್ಷಣಗಳು ಜಾತಕದಲ್ಲಿದೆಯೋ ಇಲ್ಲವೋ ಅಷ್ಟು ಮಾತ್ರ ನೋಡಿ/ತಿಳಿಸಿ ಮಂತ್ರ-ಜಪ-ಹೋಮ-ಹವನಾದಿಗಳನ್ನು ಸೂಚನೆಮಾಡಿ ತಮ್ಮ ಕರ್ತವ್ಯ ಮುಕ್ತಾಯವಾಯಿತು ಯೆನ್ನುವ ಸ್ಥಿತಿಗೆ ಬಂದಾಗಿದೆ. ಶೋಚನೀಯ.

ಹಣಸಂಪಾದನೆ-ಧರ್ಮಾಚರಣೆ-2

  
     
     ಭಗವಂತ ಸೃಷ್ಠಿಮಾಡಿದ 84 ಲಕ್ಷಜೀವರಾಶಿಗಳಲ್ಲಿ “ಹಣ” ವೆನ್ನುವುದು ಒಬ್ಬ ಮನುಷ್ಯನಿಗೆ ಮಾತ್ರ ಅನ್ವಯವಾಗುತ್ತದೆ ಉಳದ 83,99,999 ಜೀವಿಗಳಿಗೆ ಹಣದ ಜೊತೆ ಸಂಭಂದವಿಲ್ಲ ಮತ್ತು ಅವಶ್ಯಕತೆಯೂ ಇಲ್ಲ. ಈ ಜೀವಿಗಳಿಗೆ ಕತೃತ್ವವು ಬಹಳ ಸ್ವಲ್ಫವಾಗಿರುತ್ತದೆ. ಅವುಗಳಿಗೆ ಪಾಪ-ಪುಣ್ಯಗಳು ಸಂಭಂದ ಇಲ್ಲ. ಅವುಗಳಿಗೆ ಬೇಕಾದಂತಹ ವ್ಯವಸ್ತೆಯನ್ನು ಭಗವಂತ ತಮ್ಮ ಶರೀರದಲ್ಲಿಯೇ ಸೃಷ್ಠಿಸಿದ್ದಾನೆ. ಉದಾಹರಣೆಗೆ ಒಂದು ಎತ್ತು(ox) ತನ್ನನು ತಾನು ರಕ್ಷಣೆಮಾಡಿಕೊಳ್ಳುವುದಕ್ಕೆ ಒಂದು ತುಪಾಕಿಯನ್ನಾಗಲಿ, ಅದರಲ್ಲಿ ಉಪಯೋಗಿಸುವ ಗುಂಡುಗಳನ್ನಾಗಲಿ, ತುಪಾಕಿಯನ್ನು ಉಪಯೋಗಿಸುವ ಶಕ್ತಿಯನ್ನಾಗಲಿ ಭಗವಂತ ಕೊಟ್ಟಿಲ್ಲ. ಅವುಗಳಿಗೆ ಎರಡು ಚೂಪಾದ ಕೊಂಬುಗಳನ್ನು ಇಟ್ಟೀದ್ದಾನೆ. ಯಾರದರೂ ಎತ್ತಿಗೆ ತೊಂದರೆಯನ್ನು ಕೊಟ್ಟರೆ ಕೊಂಬುಗಳಿಂದ ಚುಚ್ಚಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ವ್ಯವಸ್ತೆಮಾಡೀದ್ದಾನೆ ಭಗವಂತ. ಒಂದು ಹುಲಿಗೆ ಬಲವಾದ ಉಗುರುಗಳನ್ನು ಕೊಟ್ಟೀದ್ದಾನೆ ತನನ್ನು ತಾನು ರಕ್ಷಣೆಮಾಡೀಕೊಳ್ಳುವುದಕ್ಕಾಗಿ ಮತ್ತು ಬೇಟೆಯಾಡುವುದಕ್ಕಾಗಿ. ಒಂದು ಆನೆಗೆ ಬಲವಾದ ಸೊಂಡಿಲವನ್ನು ಕೊಟ್ಟಿದ್ದಾನೆ ಯಾರದರು ತೊಂದರೆ ಕೊಟ್ಟರೆ ಸೊಂಡಿಲದಿಂದ ಯೆಸೆಯುವುದಕ್ಕಾಗಿ. ಒಂದು ಕುರಿಗೆ ಶರೀರದ ತುಂಬಾ ಉಣ್ಣೆಯನ್ನು ಕೊಟ್ಟಿದ್ದಾನೆ ಚಳಿಯಿಂದ ತನ್ನನು ತಾನು ರಕ್ಷಣೆಮಾಡಿಕೊಳ್ಳುವುದಕ್ಕಾಗಿ. ಒಂದು ಹದ್ದಿಗೆ ಎರಡು ಬಲವಾದ ರೆಕ್ಕೆಗಳನ್ನು ಕೊಟ್ಟೀದ್ದಾನೆ ಅದರ ಸಹಾಯದಿಂದ ಮೇಲಕ್ಕೆ ಹಾರುವುದಕ್ಕಾಗಿ. ಹೀಗೆ ಪ್ರತಿವೊಂದು ಜೀವಿಗು ಅವಸರವಾದ ರಕ್ಷಣೆಯನ್ನು ಭಗವಂತ ಮಾಡಿಕೊಟ್ಟಿದ್ದಾನೆ. ಆದರೆ ಮನುಷ್ಯಪ್ರಾಣಿಗೆ ಮಾತ್ರ ಈ ವ್ಯವಸ್ಥೆಗಳು ಯಾವೂ ಕೊಟ್ಟಿಲ್ಲ. ತನ್ನನು ತಾನು ರಕ್ಷಣೆಮಾಡಿಕೊಳ್ಳುವುದಕ್ಕೆ ಪ್ರತ್ಯೇಕವಾಗಿ ಯಾವ ಸಾಧನವನ್ನು ಭಗವಂತ ಮನುಷ್ಯನ ಶರೀರದಲ್ಲಿ  ಇಟ್ಟಿಲ್ಲ. ಇದಕ್ಕೆ ಕಾರಣ ಮನುಷ್ಯನಿಗೆ ಯೆಲ್ಲಜೀವಿಗಳಿಗಿಂತಲು ದೊಡ್ಡದಾದ ಮತ್ತು ಪ್ರತ್ಯೇಕವಾದಂತಹ ಒಂದು ವ್ಯವಸ್ಥೆಯನ್ನು ಇಟ್ಟಿದ್ದಾನೆ. ಭಗವಂತ ಮನುಷ್ಯನಿಗೆ ಎರಡು ವಿಶೇಷವಾದ ಮತ್ತು ಪ್ರತ್ಯೇಕವದಂತಹ ಎರಡು ಸಾಧನೆಗಳನ್ನು ಕೊಟ್ಟೀದ್ದಾನೆ.  ಅವುಗಳಲ್ಲಿ ಒಂದು “ಬುದ್ಧಿ” ಮತ್ತೊಂದು “ಮಾತು”. ಭಗವಂತ ಉಳದ ಜೀವಿಗಳಿಗೆ ಕೊಟ್ಟಂತಹ ಸಾಧನೆಗಳನ್ನು ಮನುಷ್ಯ ತನ್ನ ಬುದ್ಧಿ ಮತ್ತು ಮಾತು ಸಹಾಯದಿಂದ ಪಡೆದು ಅನುಭವಿಸುತ್ತಾನೆ. ಬುದ್ಧಿಯಿಂದಲೇ ಮನುಷ್ಯನಿಗೆ ಆ ಶಕ್ತಿ ಬಂದಿದೆ ಹಾಗಾಗಿ ಮನುಷ್ಯ ಬುದ್ಧಿಯನ್ನು ಉಪಯೋಗಮಾಡಿ ತಾನು ಮೀನಿನಂತೆ ನೀರಿನಲ್ಲಿ ಪ್ರಯಾಣಮಾಡುತ್ತಾನೆ. ಪಕ್ಷೀಯಂತೆ ವಿಮಾನದಲ್ಲಿ ಆಕಾಶಮಾರ್ಘದಲ್ಲಿ ಸಂಚಾರಮಾಡೂತ್ತಾನೆ, ಕುದರೆಯಂತೆ ವೇಗವಾಗಿ ಒಂದು ವಾಹನದಲ್ಲಿ ಸಂಚಾರಮಾಡುತ್ತಾನೆ. ಒಂದು ಎತ್ತು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಕೊಂಬುಗಲನ್ನು ಹೇಗೆ ಬಳಿಸಿಕೊಳ್ಳುತ್ತದೆಯೋ ಅದೇರೀತಿ ಮನುಷ್ಯ ತನ್ನನ್ನು ತಾನು ರಕ್ಷಣೆಮಾಡಿಕೊಳ್ಳುವುದಕ್ಕೆ ಒಂದು ಕತ್ತಿಯನ್ನಾಗಲಿ, ತುಪಾಕಿಯನ್ನಾಗಲಿ ಉಪಯೋಗಿಸುವ ಶಕ್ತಿಯನ್ನು ಬುದ್ದಿ ಸಹಾಯದಿಂದ ಹೊಂದುತ್ತಿದ್ದಾನೆ. ಮಲ್ಲಯುದ್ದವನ್ನು ಕಲಿಯುತ್ತಾನೆ. ಕುರಿಯ ಉಣ್ಣೆಯನ್ನು ಕತ್ತರಿಸಿ ಚಳಿಯಿಂದ ರಕ್ಷಣೆಮಾಡಿಕೊಳ್ಳುವುದಕ್ಕೆ ವಸ್ತ್ರಗಳನ್ನು ಮಾಡಿಕೊಳ್ಳುತಿದ್ದಾನೆ. ಭಗವಂತ ಎಲ್ಲ ಪ್ರಾಣಿಗಳಿಗೆ ಏನೇನು ಪ್ರತ್ಯೇಕವಾದಂತ ವ್ಯವಸ್ಥೆಯನ್ನು ಮಾಡಿದ್ದಾನೋ ಅವುಗಳನ್ನೆಲ್ಲವನ್ನೂ ತನ್ನದಾಗಿ ಬಳಿಸಿಕೊಳ್ಳುವ ದಕ್ಷತೆ ಬುದ್ಧಿಯಿಂದ ಮನುಷ್ಯನಿಗೆ ಆಗಿದೆ. ಇಂತಹ ಆಪಾರವಾದ ಶಕ್ತಿಯುಳ್ಲದ್ದಾದ ಬುದ್ಧಿಯಿಂದ ಈಲೋಕದಲ್ಲಿ  ಹಣವನ್ನು ಸೃಷ್ಟಿಮಾಡಿದ್ದಾನೆ ಮನುಷ್ಯ.    



          ಹಣದಬಗ್ಗೆ ಮತ್ತಿಷ್ಟು ಆಳವಾಗೆ ವಿಚಾರಮಾಡಿದರೆ     “ಹಣ”ವೆಂಬುವುದು ಚತುರ್ಮುಖನ ಸೃಷ್ಠಿಯಲ್ಲಿ ಬಂದ ಪದಾರ್ಥವಲ್ಲ. ಭಗವಂತ ಹಣವನ್ನು ಸೃಷ್ಠಿಮಾಡಲಿಲ್ಲ. ಚತುರ್ಮುಖ ಬ್ರಹ್ಮನ ಸೃಷ್ಠಿಯಲ್ಲಿ ಹಣವೆನ್ನುವ ಮಾತು ಇಲ್ಲ. ಭಗಂತ ಸೃಷ್ಠಿ ಮಾಡಿದ ಪದಾರ್ಥವೆ ಆದರೇ ಅದು ಎಲ್ಲಕಡೆಯೂ ಒಂದೇರೀತಿ ಪ್ರಯೋಜನವನ್ನು ಉಂಟುಮಾಡುತ್ತದೆ. ಉದಾಹರಣೆಗೆ ಭಗವಂತ ಸೃಷ್ಠಿಮಾಡಿದ ಒಂದು ಮಾವಿನ ಮರ ಭಾರತದಲ್ಲಾದರು ಅಮೆರಿಕದಲ್ಲಾದರು ಮಾವಿನಹಣ್ಣನ್ನೇ ಕೊಡುತ್ತದೆ. ಅದು ಬೇರೇ ಹಣ್ಣು ಕೊಡುವುದಿಲ್ಲ. ಆದರೆ ಅಮೆರಿಕದಲ್ಲಿ ಚಲಾವಣೆಯಲ್ಲಿರುವ ಡಾಲರು(USD) ಭಾರತದಲ್ಲಿ ಚಲಾವಣೆಗೆ ಬಾರದಂತಿರುವುದು, ಭಾರತದ ರೂಪಾಯಿ(INR) ಅಮೆರಿಕದಲ್ಲಿ ಚಲಾವಣಿಯಾಗದಂತಿರುವುದು ಭಗವಂತನ ಸೃಷ್ಠಿಗೆ ಸಂಭಂದಪಟ್ಟದ್ದಲ್ಲ. ಹಣವನ್ನು ಸೃಷ್ಠಿಮಾಡಿದವನು ಮನುಷ್ಯ. ಒಬ್ಬ ಹಿರಿಹ ವಿದ್ವಾಂಸ ಹೇಳುತ್ತಾನೆ “ಧರಿದ್ರವೆನ್ನುವ ಮಾತ ಪ್ರಾರಂಭವಾದದ್ದೆ ಹಣ ಬಂದನಂತರ” ಅಂತ. ಹಣದ ಸೃಷ್ಠಿಯಾದ ನಂತರವೇ ಮನುಷ್ಯನಿಗೆ ಸಂಪಾಧನೆ ಮಾಡಬೇಕುಯೆನ್ನುವ ಬಯಕೆ ಹೆಚ್ಚಾಯಿತು. ಬಯಕೆ, ಚಟ ಯೆನ್ನುವ ಮಾತ  ಹಣಸಂಪಾದನೆ ವಿಷಯಕ್ಕೆ ಅನ್ವಯವಾಗದಷ್ಟುಕಾಲ ಧ್ರವ್ಯಾರ್ಜನೆಯಲ್ಲಿ ಯಾವ ದೋಷವೂ ಇಲ್ಲ. ಇಲ್ಲಿ ಒಂದು ಪ್ರಶ್ನೆ ಬರಬಹುದು “ಒಂದುವೇಳ ಹಣವೆನ್ನುವುದು  ಭಗವಂತನ ಸೃಷ್ಠಿಯ ಪದಾರ್ಥ ಅಲ್ಲದಿದ್ದಲ್ಲಿ ಬೇರೇ ಯಾವ ಮಾತಿನಿಂದ ಅದು ಅನ್ವಯವಾಗುತ್ತಿತ್ತು?? ಯೆನ್ನುವ ವಿಷಯ ತಿಳಿಬೇಕಾಗುತ್ತದೆ”. ಹಣದ ಸೃಷ್ಟಿಯಾಗುವುದಕ್ಕಿಂತಲು ಮುನ್ನ ನಮ್ಮ ಪ್ರಾಚೀನರು ಬೇರೆ ಯಾವ ಅರ್ಥದಲ್ಲಿ ಸಂಭೋದಿಸುತ್ತಿದ್ದರು? ಅಂತ ತಿಳಿಬೇಕಾಗುತ್ತದೆ. ಹಣದ ಸೃಷ್ಟಿಯಾಗುವುದಕ್ಕಿಂತಲೂ ಪೂರ್ವ ಹಣಯೆನ್ನುವುದಕ್ಕೆ ಬದಲಾಗಿ “ಅರ್ಥ” ಮತ್ತು “ಅರ್ಥಾರ್ಜನೆ” ಯೆನ್ನುವ ಹೆಸರನ್ನು ಬಳಿಕೆಯಲ್ಲಿತ್ತು. ಹಾಗಾಗಿಯೇ ನಮ್ಮಲ್ಲಿ ಸಂಕಲ್ಪ/ಆಶೀರ್ವಾದ ಮಾಡುವಾಗ “ಧರ್ಮಾರ್ಥಕಾಮಮೋಕ್ಷ ಚತುರ್ವಿದ ಫಲಪುರುಷಾರ್ಥಸಿಧ್ಯರ್ಥಂ…….” ಅಂತ ಹೇಲುತ್ತಿದ್ದರು. 

     ಪುರುಷಾರ್ಥಗಳಲ್ಲಿ ಒಂದಾದ “ಅರ್ಥ” ಯೆನ್ನುವ ಮಾತಿಗೆ ಅರ್ಥವೇನೆಂದರೆ “ಸಮಸ್ಥವಾದಂತ ಭೋಗಗಳನ್ನು ಅನುಭವಿಸುವುದಕ್ಕೆ ಬೇಕಾದ ವಸ್ತು ಸಾಮಗ್ರಿಗಳನ್ನು ಸಂಗ್ರಹಣೆಮಾಡುವ ಜವಾಬ್ದಾರಿತನ”. ಈ ಜವಾಬ್ಧಾರಿಗೇ ಅರ್ಥವೆನ್ನುವ ಹೆಸರು. ಮನುಷ್ಯ ತಾನು ಸುಖಪಡುವುದಕ್ಕಾಗಿ  ಏನೇನು ಬಯಸುತ್ತಾನೋ ಅವುಗಳನ್ನೆಲ್ಲ ಪಡೆಯುವುದಕ್ಕೆ ಮತ್ತು ಅನುಭವಿಸುವುದಕ್ಕೆ ಬೇಕಾದಂತಹ ವಸ್ತು-ಸಾಮಗ್ರಿಗಳ ರಾಶಿಯನ್ನು “ಅರ್ಥ” ಅಂತ ಶಾಸ್ತ್ರ ಪ್ರತಿಪಾಧನೆ ಮಾಡಿದೆ.
         
      ಇನ್ನು ಭೋಗದ ವಿಚಾರಕ್ಕೆ ಬಂದರೆ ಮನುಷ್ಯನಲ್ಲಿ “ಭೋಗ” ಯೆನ್ನುವುದು ಅವರವರ ಮಟ್ಟಕ್ಕೆ ತಕ್ಕಂತೆ ಇರುತ್ತದೆ. ಎಲ್ಲರು ಬಯಸುವ ಭೋಗ ಒಂದೇರೀತಿ ಇರುವುದಿಲ್ಲ. ಒಬ್ಬನಿಗೆ ತಾಳೆಎಲೆ ಮನೆಯಲ್ಲಿ ನಿವಾಸಮಾಡುವುದು ಭೋಗ. ಮತ್ತೊಬ್ಬನಿಗೆ ರಸ್ತೆಯ ಪಕ್ಕದಲ್ಲಿ ಮಲಗುವುದು ಭೋಗ. ಹೀಗೆ ಕೆಲವರ ಭೋಗದ ಮಟ್ಟ ಅಷ್ಟುವರಿಗೇ ಮಾತ್ರ ಇರುತ್ತದೆ. ಇನ್ನು ಕೆಲವರ ಭೋಗ ಹೇಗಿರುತ್ತದೆಯೆಂದರೇ “ಬೇಸಿಗೆಯಲ್ಲಿ ಮನೆಯ ಹೊರಗೆ ಬಿಸಿ ಇದ್ದರೆ ಮನೆ ವೊಳಗೆ ತಂಪಾಗಿ ಇರುವಂತೆ ಮಾಡಿಕೊಳ್ಳುವುದು ಮತ್ತು ಮನೆಯ ಹೊರಗೆ ತಂಪಾಗಿದ್ದಲ್ಲಿ ಮನೆಯವೊಳಗೆ ಬಿಸಿ ಮಾಡಿಕೊಳ್ಳುದು ಅವರ ಭೋಗ”. ಇಂತಹ ಹೆಚ್ಚಿನ ಸುಖವನ್ನು ಬಯಸುವ ಮನುಷ್ಯ ತನ್ನ ಮನಸ್ಸು ಯಾವುದನ್ನು ಅಪೇಕ್ಷಿಸುತ್ತದೋ ಅಂತಹ ಭೋಗವನ್ನು ಪ್ರಕೃತಿ ನಿಯಮಕ್ಕೆ ವಿರೋದವಾಗಿಯಾದರೂ ನಿರ್ಮಾಣ ಮಾಡೀಕೊಂಡು ಅನುಭವಿಸುತ್ತಾನೆ. ಈತರ ಭೋಗವನ್ನು ನಿರ್ಮಾಣಮಾಡುವ ಪ್ರಯತ್ನ ಮನುಷ್ಯ ಮಾತ್ರ ಮಾಡುತ್ತಾನೆ. ಈ ನಿರ್ಮಾಣದಲ್ಲಿ ಬಂದ ಕ್ರಮವೇ “ಹಣ”.  ಮತ್ತು ಈ ಹಣದಿಂದ ಏನೇನು ಪರಿಣಾಮವಾಗುತ್ತದೆ ಯೆನ್ನುವುದನ್ನೂ ಸಹ ನೋಡೋಣ.

      “ಹಣ”ದಮೇಲೆ ಸರಿಯಾದ ಸ್ಪಷ್ಟತೆ ಮತ್ತು ಖಾಳಜಿ ಇಲ್ಲದ ದಿನ ಮನುಷ್ಯ ಇಂದ್ರಿಯತೃಷ್ಣೆಗೆ ವಶನಾಗುತ್ತಾನೆ. ತೃಷ್ಣೆ ಯೆನ್ನುವ ಮಾತಿನ ಅರ್ಥವೇನೆಂದರೆ ಕಡುಬಯಕೆ, ಭೋಗಲಾಲಸೆ, ಇಂದ್ರಿಯವ್ಯಾಮೋಹ ಅಥವ ಚಟ ಅಂತ. ಮನುಷ್ಯ ಇಂತಹ ತೃಷ್ಣೆಗೆ ವಶನಾದರೆ ತನ್ನಲ್ಲಿ ಜನಿಸುವ ಬಯಕೆಗಳಿಗೆ ಕೊನೆಯೇ ಯಿರುವುದಿಲ್ಲ. ಸಹಹವಾದ ಬಯಕೆಗಳನ್ನು ತೃಷ್ಣೆಯೆನ್ನುವುದಿಲ್ಲ. ಇಂದ್ರಿಯತೃಷ್ಣೆ ಅಂತ ಯಾವಗ ಕರೆಯುತ್ತಾರೆ ಅಂದರೆ ಮನುಷ್ಯನ ಮನಸ್ಸು ಬಯಕೆಗಳ ಹಿಂದೆ ಓಡುವುದು ಪ್ರಾರಂಭವಾಗುತ್ತದೆ. ಉದಾಹರಣೆಗೆ ಮರುಭೂಮಿಯಲ್ಲಿ ಸಂಚಿರಿಸುವ ಜಂತುಗಳೀಗೆ ಎಲ್ಲೋ ದೂರದಲ್ಲಿ ನೀರಿದ್ದಂತೆ ಕಾಣುತ್ತದೆ ಹತ್ತರ ಹೋದಾಗ ಅದು ನೀರು ಅಲ್ಲವೆನ್ನುವುದು ಗೊತ್ತಾಗುತ್ತದೆ. ಹಾಗೆ ಓಡುತ್ತಾ ಓಡುತ್ತಾ ನೀರು ಸಿಗದೆ ಪ್ರಾಣವನ್ನು ಬಿಡುತ್ತದೆ. ಬಾಯಾರಿಕೆ ಹೊಂದಿದ ಪ್ರಾಣಿಯನ್ನು ನೀರಿನಂತೆ ಕಾಣಿಸಿಕೊಂಡು ಓಡುವಂತೆ ಮಾಡಿ ಕೊಲ್ಲುವುದು ಯಾವುದುಯಿದೆಯೋ ಅದನ್ನೇ ಹಣದವಿಷಯದಲ್ಲಿ ಇಂದ್ರಿಯತೃಷ್ಣೆ ಯೆನ್ನುತ್ತಾರೆ. ಇಂದ್ರಿಯತೃಷ್ಣೆ ಮನುಷ್ಯನನ್ನು ವಿಚಾರಶೂನ್ಯನನ್ನಾಗಿ ಮಾಡಿ ತನ್ನಲ್ಲಿ ತನಗೆ ನಿಯಂತ್ರಣೆ ಇಲ್ಲದಂತೆ ಮಾಡುತ್ತದೆ. ತೃಷ್ಣೆಗೆ ವಶನಾದ ಮನುಷ್ಯನಿಗೆ  ಹಣವನ್ನು ಸಂಪಾದನೆ ಮಾಡುವುದೇ ಜೀವನದ ಪ್ರಧಾನ ಕರ್ತವ್ಯವಾಗುತ್ತದೆ. ಹಾಗಾಗಿ ತನ್ನನ್ನು ತಾನೆ ಸಂಪಾಧನೆ ಮಾಡಲು ತೊಡಗಿಸಿಕೊಳ್ಲುತ್ತಾನೆ . ಹಣ ಸಂಪಾದನೆ ಮಾಡುವುದೇ ತನ್ನ ಕರ್ತವ್ಯ ಅಂತ ತಿಳಿದ ತಕ್ಷಣವೇ ಪಕ್ಕದಲ್ಲೇ ಒಂದು ನೆರಳು ರೂಪುಗೊಳ್ಳುತ್ತದೆ ಅದನ್ನೆ “ಕಾಮ”ವೆನ್ನುತ್ತಾರೆ. ಕಾಮವೇ ಭೋಗಕ್ಕೆ ಕಾರಣವಾಗುತ್ತದೆ. ಕಾಮವೆಂದರೆ ಎಲ್ಲಸಮದಲ್ಲಿ ಸ್ತ್ರೀ-ಪುರುಷರ ಸಂಭಂದವಾದ ಹ್ಯೇಯವಾದ ಕಾಮವಾಗಿ ಸ್ವೀಕರಿಸಬಾರದು. ಶಾಸ್ತ್ರದ ದೃಷ್ಠಿಯಲ್ಲಿ ಕಾಮನೆ ಎಂದರೆ ಬಯಕೆ. ಯಾವ ಮನುಷ್ಯ ಕಡುಬಯಕೆಯನ್ನು ಹೊಂದಿ ದ್ರವ್ಯಾರ್ಜನೆಗಾಗಿ ಓಡಲಾರಂಬಿಸುತ್ತಾನೋ ಅವನು ಆ ಕಡುಬಯಕೆಗೆ ಹುಲ್ಲುಕಡ್ಡಿಗಿಂತಲು ಹೀನವಾಗುತ್ತಾನೆ. ಕಡುಬಯಕೆಯು ಮನುಷ್ಯನನ್ನು ತನ್ನ ಸುತ್ತಲು ಸುತ್ತುವಂತೆ ಮಾಡುತ್ತದೆ. ಮನುಷ್ಯನಿಗೆ ಆಲೋಚನೆಮಾಡಿಕೊಳ್ಳುವ ಅವಕಾಶವನ್ನೂ ಕೊಡುವುದಿಲ್ಲ. ಕಡುಬಯಕೆಗೆ ಒಳಗಾದ ಮನುಷ್ಯನಿಗೆ ಬುದ್ಧಿಯನ್ನು ಉಪಯೋಗಿಸುವ ಲಕ್ಷಣವೇ ಇರುವುದಿಲ್ಲ. ಯುಕ್ತಾಯುಕ್ತ ವಿಚಕ್ಷಣೆ, ವಿವೇಕಪ್ರಜ್ಞೆ ಇರುವುದಿಲ್ಲ. ಸಂಪಾದನೆಗಾಗಿ ಪ್ರತಿದಿನ ಓಡುತ್ತಿರುತ್ತಾನೆ, ಹಣವನ್ನು ತರುತ್ತಿರುತ್ತಾನೆ. ಕಡುಬಯಕೆಗೆ ಒಳಗಾದ ಮನುಷ್ಯನಿಗೆ “ತಾನು ಹೇಗೆ ಸಂಪಾಧನೆ ಮಾಡುತ್ತಿದ್ದೇನೆ” ಯೆನ್ನುವ ಪ್ರಜ್ಞೆಯಿರುವುದಿಲ್ಲ. ತಾನು ಎಷ್ಟು ಸಂಪಾದನೆ ಮಾಡುತ್ತಿದ್ದೇನೆ ಎನ್ನುವುದರಬಗ್ಗೆ ಮಾತ್ರ ಆಲೋಚನೆ ಮಾಡುತ್ತಾನೆ.

     ಒಂದುವೇಳೆ ಮನುಷ್ಯ ತಾನು ಹೇಗೆ ಸಂಪಾದನೆ ಮಾಡುತಿದ್ದೇನೆ ಯೆನ್ನುವ ವಿಷಯವನ್ನು ಆಲೋಚನೆಮಾಡಿದರೆ ಧರ್ಮದ ಕಡೆಗೆ ಮರಳೀದ್ದಾನೆ ಯೆಂತು ಗುರುತು. “ಎಷ್ಟು ಸಂಪಾಧನೆ ಮಾಡುತ್ತಿದ್ದೇನೆ” ಯೆನ್ನುವುದರಬಗ್ಗೆ ಮಾತ್ರ ಆಲೋಚನೆಮಾಡಿತ್ತಿದ್ದಾನೆ ಯೆಂದರೆ ಧರ್ಮಜೊತೆ ಸಂಭಂದ ಬಿಟ್ಟುಹೋಗಿದೆ ಅಂತ ಗುರ್ತಿಸಬೇಕು. ಮನುಷ್ಯ ಒಂದುಸಲ ಧರ್ಮದಜೊತೆ ಸಂಭದವು ಬಿಟ್ಟುಹೋಗಿ ತೃಷ್ಣೇಗೆ(ಕಡುಬಯಕಿಗೆ) ವಶನಾದರೆ ಉತ್ತರಕ್ಷಣ ಪಕ್ಕದಲ್ಲಿ ಬೆಳೆಯುವುದು ಕಾಮನೆ(Desires). ಹಣಸಂಪಾದನೆ ಮಾಡುವುದೇ ಪ್ರಧಾನ ಕರ್ತವ್ಯ ಅಂತ ತಿಳಿದವನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸಂಪಾದನೆಗಾಗಿ  ಹಾರಾಡುತ್ತಾ ಹಣವನ್ನು ತಂದು ರಾಶಿರಾಶಿಯಾಗಿ ಹಾಕಿ ಕೂಡಿಡುವುದು ಅವ್ಯಾಸವಾಗುತ್ತದೆ.  ಒಂದುಸಲ ಇಂತಹ ಅವ್ಯಾಸ ಬೆಳದರೇ ದೊಡ್ಡದೊಡ್ಡ ಅನರ್ಥಗಳಿಗೂ ಕಾರಣವಾಗುತ್ತದೆ. ಅದು ಎಷ್ಟುದೂರ ಹೋಗುತ್ತದೆ ಯೆಂದರೆ ದೊಡ್ಡ ದೊಡ್ಡ ಭವನಗಳಿಂದ ಹಿಡದು ಸಮಸ್ತ ಭೋಗಗಳು ತನ್ನ ಸ್ವಂತ ಆಗಬೇಕೆನ್ನುವ ತಾಪತ್ರಯ ಪ್ರಾರಂಭವಾಗುತ್ತದೆ. ಈ ತಾಪತ್ರಯದಲ್ಲಿ ಏಷ್ಟೇ ದೊಡ್ಡ ಹಿರಿಮೆಯುಳ್ಳದ್ದಾದರೂ ತನ್ನವಶವಾಗಬೇಕೆನ್ನುವ ಬಯಕೆ ಪ್ರಾರಂಭವಾಗುತ್ತದೆ. ಕೊನೆಗೆ ಒಂದು ಟಿಕೆಟ್ಟು ಖರೀದಿಸಿ ವಿಮಾನವು ಹತ್ತುವುದು ಮಾತ್ರವಲ್ಲ ತನ್ನದೇ ಆದ ವಿಮಾನ, ವಿಮಾನ ನಿಲ್ದಾಣಸ್ಥಳ ಇರಬೇಕೆನ್ನುವಷ್ಟು ಮಟ್ಟಕ್ಕೆ ಬಯಸುತ್ತಾನೆ. ಹಾಗಾಗಿ ಕಾಮನೆಗೆ ಕೊನೆ ಇಲ್ಲ ಅಂತ ಗ್ರಹಿಸಬೇಕು.
ಇಂತಹ ಸ್ಥಿತಿಯನ್ನು ಶಾಸ್ತ್ರ ಈ ರೀತಿ ವರ್ಣನೆ ಮಾಡುತ್ತದೆ. “ಅಗ್ನಿಹೋತ್ರದಲ್ಲಿ ತುಪ್ಪಹಾಕಿ ಅಗ್ನಿಯನ್ನು ಶಾಂತಗೊಳಿಸಲು ಮಾಡುವ ಪ್ರಯತ್ನ”. ಒಂದು ಕಡೆ ಬೆಂಕೆ ಹತ್ತಿದೆ, ಆ ಬೆಂಕಿಯನ್ನು ಆರಿಸಲು ತಂದೆ ನೀರಿಗಾಗಿ ಹುಡುಕುತಿರುತ್ತಾನೆ. ಆ ಮನೆಯ ಒಂದು ಕೋಣೆಯಲ್ಲಿ ಯಾಗ ಮಾಡುವುದಕ್ಕಾಗಿ ಇಟ್ಟಿದಂತ ತುಪ್ಪದ ಪಾತ್ರೆಯಿದೆ. ಬೆಂಕಿಯ ಬಿಸಿಗೆ ತುಪ್ಪವೆಲ್ಲ ಕರಿಗಿಹೋಗಿದೆ. ನೀರಿನಂತಿರುವ ತುಪ್ಪವನ್ನು ನೋಡಿ ತನ್ನ ಮಗ “ಇದು ನೀರಿನಂತಿದೆ ಇದೆ. ಇದನ್ನು ಎಸೆದರೆ ಬೆಂಕಿ ಶಾಂತಗೊಳೆಯುತ್ತದೆ” ಅಂತ ಆಲೋಚನೆ ಮಾಡಿ ಬೆಂಕಿಯಮೇಲೆ ತುಪ್ಪವನ್ನು ಎಸಯುತ್ತಾನೆ ಮಗ. ತುಪ್ಪ ಎಸೆಯುವುದರಿಂದ ಅಗ್ನಿಹೋತ್ರವು ಶಾಂತಿಸುತ್ತದೆಯೇ? ಬದಲಿಗೆ ಹೆಚ್ಚಾಗಿ ಉರಿಯಲಾರಂಬಿಸುತ್ತದೆ. ಇದೇರೀತಿ ಮನುಷ್ಯ “ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುವುದರಿಂದ ತೃಪ್ತಿ ಸಿಗುತ್ತದೆ” ಯೆನ್ನುವುದು “ತುಪ್ಪವನ್ನು ಹಾಕಿ ಅಗ್ನಿಹೋತ್ರವನ್ನು ಆರಿಸುವ ಪ್ರಯತ್ನ ಮಾಡಿದಂತೆ” ಆಗುತ್ತದೆ.
          
     ಬಯಕೆಗಳನ್ನು ಈಡೇರಿಸಿಕೊಳ್ಳುವುದರಿಂದ ಯಾವಕಾಲಕ್ಕೂ ತೃಪ್ತಿಯು ಸಿಗುವುದಿಲ್ಲ. ಏಕೆಂದರೆ ಮನಸ್ಸಿಗೆ ಒಂದು ದೊಡ್ಡ ದೌರ್ಭಲ್ಯವಿರುತ್ತದೆ. ಭೋಗಾನುಭವದಲ್ಲಿ ಮನಸ್ಸು ಯುಕ್ತಾಯುಕ್ತ ವಿಚಕ್ಷಣೆ ಮತ್ತು ವಿವೇಕದಿಂದ ಇರುವುದಿಲ್ಲ. ವಿವೇಕಪ್ರಜ್ಞೆ ಇಲ್ಲದವನಿಗೆ ಧರ್ಮಾಧರ್ಮಗಳ ಯೆಚ್ಚರವಿರುವುದಿಲ್ಲ. ಒಂದುಸಲ ಕಡುಬಯಕಿಗೆ ವಶನಾಗಿ ಧರ್ಮ-ಅಧರ್ಮ ಎನ್ನುವ ಮಾತನ್ನು ತೊರೆದವನಿಗೆ ಇದು ಪಾಪ-ಇದು ಪುಣ್ಯ ಯೆನ್ನುವ ಆಲೋಚನೆ ಮಾಡುವ ಅವಕಾಶವೂ ಇರುವುದಿಲ್ಲ. ಇಲ್ಲಿ ಪಾಪವೆಂದರೇ “ಭಗವಂತ ಹೀಗೆ ಮಾಡಬೇಡ ಅಂತ ಯಾವುದು ಹೇಳಿದ್ದಾನೋ (ನಿಷೀದ್ದಕರ್ಮ) ಅದು ಮಾಡುವುದು”. ಭಗವಂತ ಹೇಗೆ ಜೀವನಮಾಡಬೇಕು ಅಂತ ಹೇಳಿದ್ದಾನೋ ಅಂತಹ ವಿಹಿತಕರ್ಮವನ್ನು ಮಾಡುವುದರನ್ನು  ಪುಣ್ಯವೆನ್ನುತ್ತಾರೆ. ಒಂದು ಉದಾಹರಣೆ ನೋಡೋಣ.
ಒಬ್ಬ ತಂದೆ ತನ್ನ ಮಗನಿಗೆ ಸ್ವಲ್ಫ ಹಣವನ್ನು ಕೊಟ್ಟು ಅದನ್ನು ಸಂಕಟಸ್ಥಿತಿಯಲ್ಲಿ ಮಾತ್ರ ಬಳಿಸಬೇಕು ಅಂತ ಹೇಳುತ್ತಾನೆ. ತಂದೆ ಮಗನಿಗೆ ಹತ್ತುರೂಪಾಯಿ ಕೊಡುವ ಉದ್ದೇಶ ಏನಂದರೇ ಮಗ ತಾನು ಶಾಲೆಗೆ ಹೋಗುವಾಗ ಅತವಾ ಬರುವಾಗ ಯಾವುದೇ ತೊಂದರೆ ಬಂದರೆ ಅದರಿಂದ ಹೊರಗೆಬರುವುದಕ್ಕೆ ಸಾಧನವಾಗಿ ಕೊಟ್ಟಿದ್ದಾನೆ. ಒಂದು ದಿನ ಶಾಲೆಯಲ್ಲಿ ಪುಸ್ತಕಗಳ ಮಾರಾಟ ನಡೆದಾಗ ಹತ್ತುರೂಪಾಯಿ ಯನ್ನು ವೆಚ್ಚಮಾಡಿ ಉತ್ತಮವಾದ ಪುಸ್ತಕವನ್ನು ಖರೀದಿ ಮಾಡಿದರೂ ತಂದೆ ಮಗನನ್ನು ಬಯ್ಯುವುದಿಲ್ಲ. ಯೇಕೆಂದರೆ ತನ್ನಮಗ ವೊಳ್ಳೆಯ ಪ್ರಯೋಜನೆಗಾಗಿ ಖರ್ಚುಮಾಡಿದನೆಂದು ಅಭಿನಂದಿಸುತ್ತಾನೆ. ತಂದೆ ಮಗನ ಪ್ರಯೋಜನಕ್ಕಾಗಿ, ಸಂಕಷ್ಟದಿಂದ ಹೊರಬರುವುದಕ್ಕಾಗಿ ಹಣವನ್ನು ಕೊಟ್ಟಂತೆಯೇ ಭಗವಂತನೂ ಮನುಷ್ಯನಿಗೆ ಬುದ್ಧಿಯನ್ನು ಕೊಟ್ಟಿದ್ದಾನೆ. ಈ ಬುದ್ಧಿಯನ್ನುಪಯೋಗಮಾಡಿ ಭಗವಂತ ಹೇಗೆ ಭೋಗವನ್ನು ಅನುಭವಿಸಬೇಕು ಅಂತ ಹೇಳಿದ್ದಾನೊ ಅದೇರೀತಿಯಲ್ಲಿ ಮನುಷ್ಯನು ಭೋಗವನ್ನು ಅನುಭವಿಸಬೇಕು. ಭಗವಂತ ತಿಳಿಸಿದ ರೀತಿಯಲ್ಲಿ ಭೋಗವನ್ನು ಅನುಭವಿಸಿದ ಮನುಷ್ಯ ಧರ್ಮಕ್ಕೆ ಹತ್ತರಾಗುತ್ತಾನೆ.

     ಈ ಸಮಸ್ಥ ಪ್ರಪಂಚದಲ್ಲಿ ಭೋಗಸ್ಥಾನಗಳನ್ನು ಸೃಷ್ಠಿಸಿದವನು ಭಗವಂತನೊಬ್ಬನೆ. ಯಾರಿಗೂ ಅದರಮೇಲೆ ಅಧಿಕಾರವಿಲ್ಲ. ಉದಾಹರಣೆಗೆ ಒಂದು ಸುಂದರವಾದ ಜಲಪಾತವನ್ನು ಪರ್ವತದಮೇಲಿಂದ ಬೀಳುವಂತೆ ಮಾಡಿದವನು ಯಾರು? ಗುಲಾಭಿ ಹುವ್ವನ್ನು ಸುಂದರವಾಗಿ ರಚನೆಮಾಡಿದವನು ಯಾರು? ಸಾಣೆಕಲ್ಲಿನಮೇಲೆ ಗಂಧದ ಕಟ್ಟಿಗೆಯನ್ನು ಉಜ್ಜಿದಾಗ ಪರಿಮಳವನ್ನು ಕೊಡುವಂತೆ ಮಾಡಿದವನು ಯಾರು? ಹೀಗೆ ನೋಡುತ್ತಾ ಹೋದರೆ ಈ ಭೂಮಿಯಲ್ಲಿ ಎಲ್ಲವನ್ನು ರಚನೆ ಮಾಡಿದವನು ಭಗವಂತನೆ. ಭಗವಂತನೊಬ್ಬನೇ ಈ ಎಲ್ಲ ಭೋಗಸ್ಥಾನಗಳನ್ನು ಸೃಷ್ಟಿಮಾಡಿದ್ದಾನೆ. ಭಗವಂತ ಒಂದು ವೀಣೆಯನ್ನು ಕೊಟ್ಟಿದ್ದಾನೆ, ವೇಣುನಾಧವನ್ನು ಕೊಟ್ಟಿದ್ದಾನೆ, ಸಂಗೀತವನ್ನು ಕೊಟ್ಟಿದ್ದಾನೆ, ಪರ್ವತಗಳನ್ನು ಹುವ್ವಿನತೋಟಗಳನ್ನು ಕೊಟ್ಟಿದ್ದಾನೆ.ಇವೆಲ್ಲವನ್ನೂ ಭಗವಂತ ನಮಗೆ ಕೊಟ್ಟು ಇವುವಳನ್ನು ನೋಡಿದರೂ, ಕೇಳಿದರೂ ನಿಮ್ಮನ್ನು ಪಾತಳಕ್ಕೆ ವೊತ್ತಿಬುಡುತ್ತೇನೆ ಅಂತ ಭಗವಂತ ಅಂದರೇ..! ನಮಗೇನನಿಸುತ್ತದೆ?? ಭಗವಂತ ಪೈಶಾಚಿಕ ಸ್ವಭಾವವುಳ್ಲವನ್ನು ಯೆನ್ನಬೇಕಾಗುತ್ತದೆ. ಆದರೇ ಭಗವಂತ ಹಾಗೆ ಹೇಳಲಿಲ್ಲ.  ಇವೆಲ್ಲವನ್ನೂ ಭಗವಂತ ನಮ್ಮೆಲ್ಲರಿಗಾಗಿಯೇ ಸೃಷ್ಠಿಮಾಡಿದ್ದಾನೆ. ಭೋಗಿಸುವುದಕ್ಕೆ ಬೇಕಾದ ಉಪಕರಣಗಳನ್ನು ಕೂಡಾ ನಮಗೆ ಕೊಟ್ಟಿದ್ದಾನೆ ಭಗವಂತ. ಕಣ್ಣು ಕೊಟ್ಟಿದ್ದಾನೆ, ಕಣ್ಣಿಗೆ ನೋಡುವ ಶಕ್ತಿಯನ್ನೂ ಕೊಟ್ಟಿದ್ದಾನೆ. ಕಣ್ಣುಕೊಟ್ಟು ಕಣ್ಣಿಗೆ ನೋಡುವ ಶಕ್ತಿಯನ್ನು ಕೊಡದಿದ್ದರೇ ಹೇಗಿರುತ್ತದೆ..! ಒಂದು ಸಲಾ ಆಲೋಚನೆಮಾಡಿದರೇ ಈ ಪ್ರಪಂಚದಲ್ಲಿ ಎಷ್ಟೋ ಭೋಗಗಳಿಂದ ನಮಗೆ ಅನುಭವವು ಬಿಟ್ಟುಹೋಗುತ್ತದೆ? ಒಂದು ಪರ್ವತವನ್ನು ನೋಡಲಾರೆವು, ಒಂದು ದ್ವಜಸ್ಥಂಭವನ್ನು ನೋಡಲಾರೆವು, ಮಂದಿರವನ್ನು ನೋಡಲಾರೆವು, ಹುಟ್ಟಿದ ಮಗನನ್ನು ನೋಡಲಾರೆವು, ಭಗವಂತನ ಪ್ರತಿಮೆಯನ್ನು ನೋಡಲಾರೆವು, ಹುವ್ವಿನ ತೋಟವನ್ನು ಮತ್ತು ಯಾವುದನ್ನೂ ನೋಡಲಾರೆವು. ಭಗವಂತ ಕಣ್ಣು ಕೊಟ್ಟಿದ್ದಾನೆ ಕಣ್ಣೀಗೆ ನೋಡುವ ಶಕ್ತಿಯನ್ನೂ ಕೊಟ್ಟಿದ್ದಾನೆ. ಕಿವಿಯನ್ನು ಕೊಟ್ಟು ಕೇಳುವ ಶಕ್ತಿಯನ್ನೂ ಕೊಟ್ಟವನು ಭಗವಂತನೇ. ನಾವು ಮಧುರವಾದ ಸಂಗೀತವನ್ನು ಕೇಳಲು, ಗುರುಹಿರಿಯರ ಮಾತುಗಳು ಕೇಳಲು ಸಾಧನವಾಗಿ ಕಿವಿಯನ್ನು ಕೊಟ್ಟಿದ್ದಾನೆ. ಮಗ ಮುಟ್ಟಿದಾಗ ಸಂತೋಷವನ್ನು ಹೊಂದುವುದಕ್ಕೆ ಚರ್ಮವನ್ನು, ಸ್ಪರ್ಶೇಂದ್ರಿಯ ಶಕ್ತಿಯನ್ನು ಕೊಟ್ಟಿದ್ದಾನೆ. ಮೂಗಿಗೆ ವಾಸನೆ ಕಂಡುಹಿಡಿಯುವ ಶಕ್ತಿಕೊಟ್ಟಿದ್ದಾನೆ.

     ನಮಗೆ ಕಣ್ಣು ಕೊಟ್ತವನು ಭಗವಂತ, ಕಣ್ಣಿಗೆ ನೋಡುವ ಶಕ್ತಿಕೊಟ್ಟವನೂ ಭಗವಂತ, ಅದೇ ರೀತಿ ನೋಡುವುದಕ್ಕೆ ಬೇಕಾದ ವಸ್ತುಗಳನ್ನು ಸೃಷ್ಠಿಮಾಡಿದವನೂ ಭಗವಂತನೇ. ಒಂದುವೇಳೆ ಭಗವಂತ ಕಣ್ಣುಕೊಟ್ಟು, ಕಣ್ಣಿಗೆ ನೋಡುವ ಶಕ್ತಿಕೊಟ್ಟು ಒಂದು ವಸ್ತು ಇಲ್ಲದಂತೆ ಮಾಡಿದರೆ…! ಈ ಪ್ರಪಂಚದಲ್ಲಿ ನೋಡುವುದಕ್ಕೆ ಏನು ಇರುವುದಿಲ್ಲ, ಶೂನ್ಯ. ನೋಡುವುದಕ್ಕೆ ಏನು ಇಲ್ಲ ಅಂದರೆ ಇನ್ನು ಕಣ್ಣೀಗೆ ಅರ್ಥವೇನಿದೆ? ಭಗವಂತ ನಮಗೆ ಕಣ್ಣುಕೊಟ್ಟೀದ್ದಾನೆ, ಕಣ್ಣಿಗೆ ನೋಡುವ ಶಕ್ತಿಕೊಟ್ಟಿದ್ದಾನೆ, ನೋಡುವುದಕ್ಕೆ ವಸ್ತುವನ್ನು ಕೊಟ್ಟಿದ್ದಾನೆ ಆದರೆ ಅದರ ಜೊತೆ ಒಂದು ನಿಯಮವನ್ನು ಇಟ್ಟಿದ್ದಾನೆ. ತಂದೆ ಹಣವನ್ನು ಕೊಟ್ಟು ಯಾವ ಪ್ರಯೋಜನಕ್ಕಾಗಿ ಬಳಿಸಬೇಕು ಅಂತ ನಿಯಮ ಇಟ್ಟಂತೆ ಭಗವಂತ ಈ ಕಣ್ಣಿನಿಂದ ಭೋಗವನ್ನು ಅನುಭವಿಸುವಾಗ ನಾನು ಹೇಳಿದಂತೆ ಅನುಭವಿಸು ಯೆನ್ನುವ ನಿಯಮವಿಟ್ಟೀದ್ದಾನೆ. ಭಗವಂತ(ಧರ್ಮ) ಹೇಳಿದಂತೆ ಯಾರು ಅನುಭವಿಸ್ತುತ್ತಾರೋ  ಅವನು ಪುಣ್ಯಾತ್ಮ. “ನೀನು ಮದುರ ಪದಾರ್ಥ ತಿನ್ನಬಯಸುತ್ತಿಯಾ? ಪಾಯಸವನ್ನು ಮಾಡು ಆದರೆ ಅದನ್ನು ಭಗವಂತನಿಗೆ ಅರ್ಪಣೆಮಾಡಿ ಇನ್ನೊಬ್ಬರಿಗೆ ಕೊಟ್ಟು ನೀನು ತಿನ್ನು”. “ನಿನಗೆ ಹೊಸದಾದ ಬಟ್ಟೆಯನ್ನು ಧರಿಸಬಯಸುತ್ತಿಯೇ? ಸ್ವಲ್ಫ ಅರಿಶಿನ, ಕುಂಕುಮ ಬಟ್ಟೆಗಳಿಗೆ ಇಟ್ಟು ಭಗವಂತನಿಗೆ ನಮಸ್ಕಾರ ಮಾಡಿ ಧರಿಸು”. ಹತ್ತಿ ಬೆಳದರೆ ತಾನೆ ಬಟ್ಟೆ ಬರುತ್ತದೆ. ಹತ್ತಿ ಬೆಳಿಯುವಂತೆ ಮಾಡಿದವನು ಯಾರು? ಭಗವಂತನೆ. ಹಾಗಾಗಿ ಭಗವಂತನಿಗೆ ನಮಸ್ಕರಿಸಿ ಧರಿಸು. ಯಾವುದು ಅನುಭವಿಸಿದರೂ ಭಗವಂತನ ಪ್ರಸಾದದಂತೆ ಅನುಭವಿಸು.

     ಮತ್ತು ಕೆಲವಿನ ವಿಚಾರದಲ್ಲಿ ನೀನು ಇದರ ವಿಷಯಕ್ಕೆ ಹೋಗಬಾರದು, ಇದನ್ನು ಅನುಭವಿಸಬೇಡ ಅಂತ ಕೂಡಾ ಹೇಳಿದ್ದಾನೆ. ಹಾಗಾದರೆ  ಆ ವಸ್ತುವನ್ನು ಪ್ರಪಂಚದಲ್ಲಿ ಸೃಷ್ಠಿಮಾಡಿದ್ದು ಯಾಕೆ? ಯೆನ್ನುವ ಪ್ರಶ್ನೆಯೂ ಬರುತ್ತದೆ.  ಭಗವಂತ(ಧರ್ಮ) ಹೇಳುತ್ತಾನೆ ಅದು ಆ ವಸ್ತು/ವಿಷಯ ನೇರವಾಗಿ ನಿನಗೆ ಕೆಲಸಕ್ಕೆ ಬಾರದೆ ಇರಬಹುದು ಆದರೆ ಸಂಸ್ಕರಿಸುವುದಕ್ಕೆ ಅಥವಾ ಬೇರೊಬ್ಬರಿಗೆ ಉಪಯೋಗವಾಗಬಹುದು. ಉದಾಹರಣೆಗೆ ಒಂದು  ಹಾವು ಇದೆ, ಹಾವಿಗೆ ವಿಷಯಿದೆ. ಭಗವಂತ ಇಂತಹ ಹಾವನ್ನು ಏಕೆ ಸೃಷ್ಠಿಮಾಡಿದ್ದಾನೆ? ಹಾವಿನ ವಿಷವು ನಮಗೆ ಕೆಲಸಕ್ಕೆ ಬಾರದೆ ಇರಬಹುದು ಆದರೆ ಅದು ವೈದ್ಯನಿಗೆ ಔಷದಿಯಾಗಿ ಮಾಡೂವುದಕ್ಕೆ ಉಪಯೋಗವಾಗುತ್ತದೆ. ಹಾವು ಹೊಲದಲ್ಲಿರುವ ಇಲಿಗಳನ್ನು(ಮೂಷೀಕ) ಹಿಡದು ತಿಂದು ಸಸ್ಯಗಳು ನಾಶವಾಗದೆ ರೈತನನ್ನು ರಕ್ಷಣೆಮಾಡುತ್ತದೆ. ಈ ಸಮಸ್ಥವಾದ ಸೃಷ್ಠಿ ಭಗವಂತನಿಂದಲೇ ಮಾಡಲಾಗಿದೆ. ನಮಲ್ಲಿರುವ ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದಿರ್ಯಗಳು ಭಗವಂತನಿಂದಲೇ ಕೊಡಲಾಗಿದೆ. ಪಾಪಪುಣ್ಯದ ತಾರತಮ್ಯ ಯಾವ ಪ್ರಾಣಿಗೂ ಇಲ್ಲ. ಭಗವಂತ ಇಟ್ಟ ತಾರತಮ್ಯವೆಲ್ಲ ಒಂದು ಮನುಷ್ಯನಿಗೆ ಮಾತ್ರ. ಮನುಷ್ಯನೊಬ್ಬನೇ ಯಾವುದು ಭಗವಂತ(ಧರ್ಮ) ಹೇಳಿದ್ದಾನೋ ಅದನ್ನು ಮಾಡಬೇಕು. ಯಾವುದನ್ನು ಭಗವಂತ(ಧರ್ಮ) ಮಾಡಬೇಡ ಅಂತ ಹೇಳಿದ್ದಾನೆ ಅದು ಮಾಡದೇ ಇರಬೇಕು. ಈ ವಿಷಯವನ್ನು ತುಂಬಾ ಜಾಗ್ರತ್ತೆಯಾಗಿ ಗಮನಿಸಬೇಕಾಗುತ್ತದೆ. ತಕ್ಕ ಎಲ್ಲ ಪ್ರಾಣಿಗಳಿಗೆ ಒಂದೇ ಧರ್ಮ ಅದನ್ನೇ “ಪಶುಧರ್ಮ” ಯೆನ್ನುತ್ತಾರೆ. ಅದಕ್ಕೆ ಮನುಷ್ಯನತರ ಯಾವ ಧರ್ಮವೂ ಇಲ್ಲ. ಅದರ ಬುದ್ಧಿಗೆ ಯಾವುದು ಅನಿಸುತ್ತದೋ ಅದು ಮಾಡುತ್ತದೆ. ಆದರೆ ಮನುಷ್ಯನು ಹಾಗೆ ಮಾಡುವಂತಿಲ್ಲ. ಭಗವಂತ ವೇದದ ಮೂಲಕ, ಶಾಸ್ತ್ರದ ಮೂಲಕ ಯಾವುದನ್ನು ಹೇಳಿದ್ದಾನೋ ಹಾಗೆಯೇ ಜೀವನಮಾಡಬೇಕು ಹಾಗೆಯೇ ಅನುಭವಿಸಬೇಕು. ಇದಕ್ಕೆ ಧರ್ಮ ಎಂತ ಹೆಸರು. ಭಗವಂತ(ಧರ್ಮ) ಹೇಳಿದರೀತಿಯಲ್ಲಿ ಜೀವನಮಾಡುವುದನ್ನೇ “ಧಾರ್ಮಿಕ ಜೀವನ” ಅಂತ ಕರೆಯುತ್ತಾರೆ.
ಮುಂದುವರಿಯುತ್ತದೆ…

Click the below link to Read previous Article.

Friday 20 September 2019

ಹಣಸಂಪಾದನೆ-ಧರ್ಮಾಚರಣೆ-1


“ಹಣ” ಹಣದ ಬಗ್ಗೆ ಪ್ರಸ್ತಾವನೆ ಬಂದಾಗ ವೇದವು ಈರೀತಿ ಹೇಳುತ್ತದೆ.

ವೇದಮೂಲಮಿದಂ ಬ್ರಾಹ್ಮಂ
ಭಾರ್ಯಾಮೂಲಮಿದಂ ಗೃಹಂ
ಕೃಷಿಮೂಲಮಿದಂ ಧಾನ್ಯಂ
ಧನಮೂಲಮಿದಂ ಜಗತ್


    “ವೇದಮೂಲಮಿದಂ ಬ್ರಾಹ್ಮಂ” – ಬ್ರಹ್ಮಜ್ಞಾನವನ್ನು ಪಡೆದವನು ಬ್ರಾಹ್ಮಣ. ಈ ಲೋಕವೆಲ್ಲವೂ ಮನುಷ್ಯಜನ್ಮದ ಸಾರ್ಥಕತ್ವವನ್ನು ಹೊಂದುವುದಕ್ಕೆ ಬೇಕಾದ ಮಾರ್ಗವನ್ನು ಸೂಚಿಸುವವನು ಬ್ರಾಹ್ಮಣ. ಬ್ರಾಹ್ಮಣ ವೇದವನ್ನು ಪ್ರಮಾಣವಾಗಿಟ್ಟುಕೊಂಡು ಜೀವನಮಾಡುತ್ತಾನೆ. ಶಾಸ್ತ್ರವನ್ನು ಅಧ್ಯಯನ ಮಾಡಿ ಮನುಷ್ಯಜನ್ಮವನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕು, ಮನುಷ್ಯನ ಗಮ್ಯವೇನು ಎನ್ನುವ ವಿಚಾರವನ್ನು ಶಾಸ್ತ್ರದ ಚೌಕಟ್ಟಿನಲ್ಲಿ ಲೋಕಕ್ಕೆ ಸಾರುತ್ತಾನೆ. ಮನುಷ್ಯನಿಗೆ ಪ್ರಮಾಣವಾಗಿರುವ ಶೃತಿ, ಸ್ಮೃತಿ, ಪುರಾಣ, ಶಿಷ್ಟಾಚಾರ ಮೊದಲಾದವು ಬ್ರಾಹ್ಮಣನಿಂದ ಲೋಕಕ್ಕೆ ಪ್ರಚಾರವಾಗುತ್ತಲಿದೆ. ಹಾಗಾಗಿ ಬ್ರಾಹ್ಮಣನ ಜೀವನಕ್ಕೆ ವೇದವು ಆಧಾರ. ವೇದವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ವೇದ ಪ್ರಮಾಣವನ್ನು ಪ್ರಧಾನವಾಗಿ ಸ್ವೀಕರಿಸಿ ಮಾತಾಡುವ ಸ್ಥಿತಪ್ರಜ್ಞನಾದವನು ಬ್ರಾಹ್ಮಣ.



ಭಾರ್ಯಾಮೂಲಮಿದಂ ಗೃಹಂ”. ನಾವು ಒಂದು ವಯಸ್ಸು ಬಂದಮೇಲೆ ಬ್ರಹ್ಮಚರ್ಯಾಶ್ರಮದಿಂದ ಗೃಹಸ್ತಾಶ್ರಮಕ್ಕೆ ಬದಲಾಗುತ್ತೇವೆ. ಗೃಹಸ್ತಾಶ್ರಮಕ್ಕೆ ಬದಲಾಗುವುದೆಂದರೆ ಕೇವಲ ಮನೆ ಬದಲಾಗುವುದಲ್ಲ. ಪತ್ನಿಯನ್ನು ಸ್ವೀಕಾರಮಾಡುವುದು ಅಂತ ಅರ್ಥ. ಯಜ್ಞವು ಮಾಡುವುದಕ್ಕೆ ಅಧಿಕಾರವನ್ನು ವುಂಟುಮಾಡುವ ಸ್ತ್ರೀ, ಪಕ್ಕದಲ್ಲಿ ಕೂತುಕೊಳ್ಳುವ ಅಧಿಕಾರವನ್ನು ಹೊಂದಿರುವಂತ ಪತ್ನಿ “ಧರ್ಮಪತ್ನಿ”. ಧರ್ಮಪತ್ನಿಯನ್ನು ಸ್ವೀಕರಿಸಿದ ಆಶ್ರಮ ಆದ ಕಾರಣ ಆ ಆಶ್ರಮದಲ್ಲಿ ಪ್ರಧಾನ ಯಾರು ಅಂದರೆ ಸಹಧರ್ಮಚಾರಿಣಿ(ಹೆಂಡತಿ). ವಿವಾಹಮಂತ್ರಗಳ ಆಧಾರವಾಗಿ ಪುರುಷನ ಸಮಸ್ತ ಐಶ್ವರ್ಯವು ಧರ್ಮಪತ್ನಿಗೇ ಸೇರುತ್ತದೆ. ಧಾನಮಾಡುವ ಪ್ರಸಂಗಬಂದಾಗ ಸಮಸ್ತ ಐಶ್ವರ್ಯ ಶಾಸ್ತ್ರಪ್ರಕಾರ ಧರ್ಮಪತ್ನಿಯೇ ಹಕ್ಕುದಾರಳು ಹಾಗಾಗಿ ಪತ್ನಿಯ ಐಶ್ವರ್ಯವನ್ನು ಪುರುಷಧಾನ ಮಾಡುತ್ತಾನೆ, ಪುರುಷನಿಗೆ ಪ್ರತ್ಯೇಕವಾಗಿ ತನ್ನದು ಅಂತ ಏನು ಇರುವುದಿಲ್ಲ. ಹಾಗಾಗಿ ಆಶ್ರಮವನ್ನು ಬದಲಾವಣೆ ಆಗುವ ಸಮಯದಲ್ಲಿ ವೇದವನ್ನುಪ್ರಮಾಣವಾಗಿ ಇಟ್ಟುಕೊಂಡು ನಾವು ಮಾತಾಡಬೇಕಾಗಿಬಂದರೆ ಐಶ್ವರ್ಯವೆಲ್ಲವು ಧರ್ಮಪತ್ನಿಗೇ ಸೇರುತ್ತದೆ. ಹಾಗಾಗಿ “ಭಾರ್ಯಾಮೂಲಮಿದಂ ಗೃಹಂ”. ಹೆಂಡತಿ ಇಲ್ಲದ ದಿನ ಆ ಮನೆಗೆ ಅಂದವು ಇರುವುದಿಲ್ಲ, ಅದನ್ನು ಮನೆಯಾಗಿ ಯಾರು ಕರೆಯುವುದಿಲ್ಲ. ಪುರುಷನ ಶಾಂತಿ ಸ್ಥಾನ ಧರ್ಮಪತ್ನಿಯೇ ಆಗಿದ್ದಾಳೆ. ಪುರುಷನ ಪಿತೃಋಣವು ಈಡೇರುವುದಕ್ಕೆ, ಸಂತಾನವನ್ನು ಪಡೆಯುವುದಕ್ಕೆ ಕಾರಣವಾದಂತ ಧರ್ಮಕ್ಷೇತ್ರವು ಧರ್ಮಪತ್ನಿಯೇ. ದೇವತಾಋಣ ಈಡೇರುವುದಕ್ಕೆ ಒಂದು ಯಜ್ಞವನ್ನು ಮಾಡಬೇಕಾದರೆ ಹೆಂಡತಿ ಪಕ್ಕದಲ್ಲಿ ಕುಳಿತುಕೊಳ್ಳಬೇಕು. ತನಗೆ ಹುಟ್ಟಿದ ಹೆಣ್ಣುಮಕ್ಕಳನ್ನು ಕನ್ಯಾಧಾನವು ಮಾಡಬೇಕಾದರೂ ಪಕ್ಕದಲ್ಲಿ ಹೆಂಡತಿ ಯಿರಲೇಬೇಕು. ಹೆಂಡತಿ ಯಿಲ್ಲದ ದಿನ ಪುರುಷನಿಗೆ ವೈಧಿಕಧರ್ಮವನ್ನು ಆಚರಿಸುವುದಕ್ಕೆ ಅಧಿಕಾರವಿರುವುದಿಲ್ಲ. ಯಾವುದೇತರದ ಪುಣ್ಯಕಾರ್ಯವು ಶೋಭಿಸುವುದಿಲ್ಲ. ಹಾಗಾಗಿ “ಭಾರ್ಯಾಮೂಲಮಿದಂ ಗೃಹಂ”.  

   ನಮಗೆ ತಿನ್ನುವುದಕ್ಕೆ ಯೋಗ್ಯವಾದಂತ ಬೀಜಗಳು/ಹಣ್ಣುಗಳು ಸಿಗಬೇಕಾದರೆ “ಕೃಷಿಮೂಲ ಮಿದಂ ಧಾನ್ಯಂ”. ಬೇಸಾಯವನ್ನು ಪ್ರಧಾನವಾಗಿಟ್ಟುಕೊಂಡು, ಭೂಮಿಯನ್ನು ಉಳಿದು, ಬೀಜಗಳನ್ನು ಹಾಕಿ, ಬೆಳೆಯುವಂತೆ ಮಾಡಿ, ಬೆಳದಂತ ಸಸ್ಯಗಳನ್ನು ರಕ್ಷಣೆಮಾಡಿ, ಚೀಡೆ-ಹುಳ ಹಿಡಿಯದಂತೆ ನೋಡಿ, ಸರಿಯಾದ ಸಮಯದಲ್ಲಿ ಸಸ್ಯಗಳನ್ನು ಕತ್ತರಿಸಿ, ಬೀಜಗಳನ್ನು ಬಿಡಿಸಿ, ಭದ್ರಮಾಡಿ ಸಮಾಜದ ಜನರಿಗೆ ಕೊಡುವುದಕ್ಕೆ ಸಿದ್ಧವಾಗಿರುವಂತೆ ಮಾಡಿ, ಕೊನೆ ತನಕ ಕಷ್ಟಗಳನ್ನು ಪಡುವನು ರೈತ. ಇಂತಹ ರೈತನು ಇಲ್ಲದಿದ್ದರೆ ನಮಗೆ ಅನ್ನವು ಸಿಗುವುದಿಲ್ಲ. ಹಾಗಾಗಿ “ಕೃಷಿಮೂಲಮಿದಂ ಧಾನ್ಯಂ”.


    “ಧನಮೂಲಮಿದಂ ಜಗತ್”. ನಮ್ಮ ಮಾಂಸನೇತ್ರಗಳಿಗೆ ಕಾಣಿಸುವುದೆಲ್ಲ ಜಗತ್ತು ಯೆನ್ನುತ್ತಾರೆ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ಥುವಿಗು ಹುಟ್ಟುವ ತಾರೀಖು ಮತ್ತು ನಾಶವಾಗುವ ತಾರೀಖು ಇರುತ್ತದೆ. ಜನನ-ಮರಣ ಚಕ್ರದಲ್ಲಿ ಬೆರತುಹೋಗಿರುವಂತ ಸಮಸ್ತ ಪ್ರಪಂಚವನ್ನು ಜತತ್ತು ಯೆನ್ನುತ್ತಾರೆ. ಹಾಗಾಗಿ ಧನಮೂಲಮಿದಂ ಜಗತ್ ಅಂದರೇ ಜಗತ್ತು ಯಾವುದರಮೇಲೆ ಆಧಾರಪಟ್ಟಿರುತ್ತದೆಯೆಂದರ ಹಣದಮೇಲೆ ಆಧಾರಪಟ್ಟಿರುತ್ತದೆ.

    ಹಣದ ವಿಷಯದಲ್ಲಿ ಮನುಷ್ಯನಾದವನು ಕೆಲವಿನ ಜಾಗ್ರತ್ತೆಗಳನ್ನು ತೊಗೊಳ್ಲಬೇಕಾಗುತ್ತದೆ. ಹಣಸಂಪಾದನೆ ಮಾಡಬಾರದು ಅಂತಾಗಲಿ, ಹಣವನ್ನು ದ್ವೇಷಮಾಡು ಅಂತಾಗಲಿ, ಹಣದ ಸಹವಾಸ ಮಾಡಬೇಡ ಅಂತಾಗಲಿ, ಹಣವನ್ನು ಕೂಡಿಡುವುದು ಮಾಡಬಾರದು ಅಂತಾಗಲಿ ಯಾವ ಶಾಸ್ತ್ರವು ಹೇಳಲಿಲ್ಲ. ಹಣವನ್ನು ಆರ್ಜನಮಾಡಲೇಬೇಕು ಅಂತ ಶಾಸ್ತ್ರಗಳು ಸಹಾ ಗೋಷಿಸುತ್ತಿವೆ. ಹಣವನ್ನು ಸಂಪಾದನೆ ಮಾಡದ ಪಕ್ಷದಲ್ಲಿ ಆಗುವ ಅನರ್ಥಗಳನ್ನು ಕೂಡಾ ಶಾಸ್ತ್ರವು ನಮಗೆ ತಿಳಿಸುತ್ತದೆ.

ಮಾತಾ ನಿಂದತಿ ನಾಭಿನಂದತಿ ಪಿತಾ ಭ್ರಾತಾ ನ ಸಂಭಾಷತೇ
ಭೃತ್ಯಃ ಕುಪ್ಯತಿ ನಾನುಗಚ್ಛತಿ ಸುತಃ ಕಾಂತಾ ಚ ನಾಲಿಂಗತೇ |
ಅರ್ಥಪ್ರಾರ್ಥನಶಂಕಯಾ ನ ಕುರುತೇSಪ್ಯಾಲಾಪಮಾತ್ರಂ ಸುಹೃತ್
ತಸ್ಮಾದ್ದ್ರವ್ಯಮುಪಾರ್ಜಯಾಶು ಸುಮತೇ ದ್ರವ್ಯೇಣ ಸರ್ವೇ ವಶಾಃ ||


    ಸಹಜವಾಗಿ ಹೆತ್ತತಾಯಿ ಮಕ್ಕಳನ್ನು ಬಯ್ಯುವುದಿಲ್ಲ. ಅಂತಹ ತಾಯಿ ಯುಕ್ತವಯಸ್ಕನಾದ ಮಗ ಸಂಪಾದನೆ ಮಾಡದಿದ್ದರೆ ನಿಂದಿಸುತ್ತಾಳೆ. ತಂದೆ ಮಗನ ಭುಜವನ್ನು ತಟ್ಟಿ ಅಭಿನಂದಿಸುವುದಿಲ್ಲ. ಜೊತೆಗೆ ಹುಟ್ಟಿದ ಅಣ್ನತಮ್ಮಂದರು ಮಾತನಾಡುವುದಿಲ್ಲ,  “ಇವನಿಗೆ ಸಣ ಸಂಪಾದನೆ ಯಿಲ್ಲ ನಮ್ಮಮೇಲೆ ಆಧಾರಪಟ್ಟು ಜೀವನ ಮಾಡುತಿದ್ಧಾನೆ” ಯೆನ್ನುತ್ತಾರೆ. ಸೇವಕನನ್ನು ಕರದರೆ ಬರುವುದಿಲ್ಲ. ಸಂಪಾಧನೆ ಮಾಡದ ತಂದೆ ಮನೆಗೆ ಬಂದರೆ ಮಗನಾದವನು ಗೌರವಿಸುವುದಿಲ್ಲ. ಸಂಪಾಧನೆ ಯಿಲ್ಲದ/ಮಾಡದ ಗಂಡನನ್ನು ಹೆಂಡತಿ ಪ್ರೀತಿಯಿಂದ ಆಲಿಂಗನೆ ಮಾಡಿಕೊಳ್ಳುವುದಿಲ್ಲ. ಇವನು ಎಲ್ಲಿ ಹಣವನ್ನು ಕೇಳುತ್ತಾನೋ ಅಂತ ತಿಳಿದು ಮಿತ್ರರಾದವರು ಕಾಣಿಸದೆ ಸಂಚಾರಮಾಡುತ್ತಾರೆ. ಆದಕಾರಣ “ಓ ಮನುಜನೇ! ಹಣವನ್ನು ಸಂಪಾಧನೆಮಾಡು. ಆದರೆ ಪ್ರಾಮಾಣಿಕನಾಗಿ, ನಿಯತೆಲಿಂದ ಸಂಪಾದನೆಮಾಡುವುದನ್ನು ಜೀವನದಲ್ಲಿ ಅಲವಡಿಸಿಕೋ”. ಅಂತ ಶಾಸ್ತ್ರ ಹೇಳುತ್ತದೆ. ನಿಯತಿಗೆ ಇನ್ನೊಂದುಮಾತು ಧರ್ಮ. “ಧರ್ಮವು ತಪ್ಪದೇ ಸಂಪಾದನೆಮಾಡಿದ ದ್ರವ್ಯ ದಿಂದ ಸಮಸ್ತವು ನಿನಗೆ ವಶವಾಗುತ್ತದೆ, ಅನುಭವೈಕಯೋಗ್ಯವಾಗುತ್ತದೆ.” ಅಂತ ಶಾಸ್ತ್ರವು ನಮಗೆ ತಿಳಿಸುತ್ತದೆ. ಧರ್ಮವನ್ನು ಬಿಟ್ಟು ದ್ರವ್ಯವನ್ನು ಸಂಪಾಧನೆ ಮಾಡಿದ  ಪಕ್ಷದಲ್ಲಿ ಆ ದ್ರವ್ಯವು ಪ್ರಮಾದಕಾರಿ ಆಗುತ್ತದೆ ಮತ್ತು ಯಾವಾಗ ಈ ಮನುಷ್ಯನನ್ನು ಸುಡೋಣ ಅಂತ ಕಾಯುತ್ತಿರುತ್ತದೆ. ಹಾಗಾಗಿ ಧರ್ಮವನ್ನಿ ಬಿಟ್ಟು ಯಾವಾಗಲು ಸಂಪಾಧನೆಮಾಡಬೇಡ ಯೆನ್ನುವಮಾತು ಶಾಸ್ತ್ರಕಾರರ ಪ್ರತಿಪಾಧನೆ.
ಮುಂದುವರಿಯುತ್ತದೆ……

Thursday 19 September 2019

ಚಂದ್ರಯಾನ – 2

 
   
      ಕಳದ ವಾರ ನನ್ನ ಸ್ನೇಹಿತ ಹೈದರಾಬಾದ್ ನಿಂದ ಬೆಂಗಳೂರಿಗೆ(ನನ್ನ ಮನೆಗೆ) ಬಂದ. ಶಾಸ್ತ್ರದ ವಿಷಯಗಳು, ನಮ್ಮ ಅಧ್ಯಾತ್ಮ ಸಿದ್ದಾಂತಗಳ ಬಗ್ಗೆ ಮಾತನಾಡುತಾ ಜ್ಯೋತಿಷಶಾಸ್ತ್ರದ ವಿಷಯವೂ ಮಾತನಾಡಲಾರಂಭಿಸಿದೆವು. ಮುಹೂರ್ತ ವಿಷಯ ಮಾತನಾಡುವಾಗ ಚಂದ್ರಯಾನ್-2 ವಿಫಲವಾದ ವಿಷಯ ಬಂತು.
ನನ್ನ ಗೆಳೆಯ ಕೇಳಿದ “ಚಂದ್ರಯಾನ್-2 ವಿಫಲವಾಗುವುದಕ್ಕೆ ಶಾಸ್ತ್ರದ ಪರವಾಗಿ ನೀನು ಏನು ಹೇಳುತ್ತಿಯಾ?” ಅಂತ ಕೇಳಿದ.

    “ಅದರಬಗ್ಗೆ ಶಾಸ್ತ್ರದ ಪರವಾಗಿ ನೋಡುವುದೇನಿದೆ. ಜಯ-ಅಪಜಯ ಸಹಜವಲ್ಲವೇ” ಅಂತ ಉತ್ತರಿಸಿದೆ.
ಗೆಳೆಯ: “ಇಸ್ರೋ ಅವರು ಯಾವುದೇ ಉಪಗ್ರಹ ಪ್ರಯೋಗಮಾಡುವುದಕ್ಕೆ ಮುನ್ನ ಜ್ಯೋತಿಷರನ್ನ ಬೇಟಿಯಾಗಿ ಅವರ ಸಲಹೆಗಳನ್ನು ತೆಗದುಕೊಳ್ಳುವುದು ಕೇಳಿದ್ದೀನಿ. ಮತ್ತು ಉಪಗ್ರಹದಲ್ಲಿ ಉಪಯೋಗಿಸುವ ರಹಸ್ಯವಾದ ವಸ್ತು ತಿರುಮಲ ವೆಂಕಪ್ಪನ ಪಾದವನ್ನು ಮುಟ್ಟಿಸುತಾರಂತೆ ಅಲ್ವಾ!. ಮತ್ತೆ ಜ್ಯೋತಿಷದ ಮುಹೂರ್ತದ ಬಲ ಮತ್ತು ವೆಂಕಪ್ಪನ ಅನುಗ್ರಹವೇನಾಯಿತು?”

ನಾನು: “ಜ್ಯೋತಿಷನಾದವನು  ಸಮಸ್ಯೆಬಂದಾಗ ಮಾರ್ಗವನ್ನು ಸೂಚನೆಮಾಡಿ, ಮನುಷ್ಯನಲ್ಲಿ ದೌರ್ಭಲ್ಯ ಉಂಟಾದಾಗ ಧೈರ್ಯವನ್ನು ತುಂಬುವ ಕೆಲಸ ಮಾಡುತ್ತಾನೆ. ಚಂದ್ರಯಾನ್-2 ಈಗಾಗಲೆ ವಿಫಲವಾಗಿ ಆಯಿತು. ಮತ್ತೆ ಅದರಬಗ್ಗೆ ನಾವು ಚಿಂತನೆಮಾಡುವುದೇನಿದೆ”

ಗೆಳೆಯ: “ಹಾಗಾದರೇ ಜ್ಯೋತಿಷಶಾಸ್ತ್ರಪ್ರಕಾರ ವಿಫಲವಾಗುವುದಕ್ಕೆ ಕಾರಣವೇ ಇಲ್ಲವೆಂದು ಹೇಳುತ್ತೀಯಾ?” ಅಂತ ಹೆಚ್ಚಿನ ಉತ್ಸಾಹದಿಂದ ಕೇಳಿದ. ನನ್ನ ಗೆಳೆಯನಿಗೂ ಸಹ ಜ್ಯೋತಿಷಶಾಸ್ತ್ರದಲ್ಲಿ ಪರಿಜ್ಞಾನವಿತ್ತು. ಹಾಗಾಗಿ ಇದರ ಬಗ್ಗೆ ಕಿಂಚಿತ್ ಚಿಂತನೆ ಮಾಡಲು ಉಪಕ್ರಮಿಸಿದೆ.

ಚಂದ್ರಯಾನ್-2 ಶ್ರೀಹರಿಕೋಟ(ಆಂದ್ರಪ್ರದೇಶ) ಸ್ಥಳದಿಂದ ದಿನಾಂಕ 22-07-2019 ರ ಮಧ್ಯಾಹ್ನ 02:43 ನಿಮಿಷಗಳಿಗೆ ಪ್ರಯೋಗಿಸಲಾಗಿದೆ(Launch). Computer ಸಹಾಯದಿಂದ ಚಂದ್ರಯಾನ ಪ್ರಯೋಗಿಸಿದ ಸಮಯಕ್ಕೆ ತಕ್ಕಂತೆ ಗ್ರಹಸ್ಥಿತಿಯನ್ನು ಹಾಕಿಕೊಂಡೆ.



  • ಉಪಗ್ರಹವನ್ನು ಕಳುಹಿಸಿದ ಸಮಯದಲ್ಲಿ ವೃಶ್ಚಿಕಲಗ್ನ ಉದಯವಾಗಿದೆ. ಲಗ್ನಾಧಿಪತಿಯಾದ ಕುಜ ನೀಚಸ್ಥಾನದಲ್ಲಿ ಮತ್ತು ಅಸ್ಥಂಗತನಾಗಿದ್ದಾನೆ.  ಗುರು ಗ್ರಹ ವಕ್ರಗಮನದಲ್ಲಿ ಲಗ್ನದಲ್ಲೇ ಇದ್ದಾನೆ. ಶುಭಗ್ರಹ ಲಗ್ನದಲ್ಲಿರುವುದರಿಂದ ಪ್ರಯೋಗವು ಯಶಸ್ವಿಗೊಂಡಿದೆ. ಆದರೆ ವಕ್ರಗಮನದಲ್ಲಿರುವ ಗ್ರಹ ಪೂರ್ಣ ವಿಜಯವನ್ನು/ಶುಭವನ್ನು ಸೂಚನೆ ಮಾಡಲಾರದು. ಶುಭಗ್ರಹಗಳು ವಕ್ರಿಯಾದಾಗ ಶುಭಫಲವನ್ನು ನೀಡುವುದು ಕಷ್ಟ.
  • ದೂರ ಪ್ರಯಾಣಗಳನ್ನು ನವಮಸ್ಥಾನ ಸೂಚನೆ ಮಾಡುತ್ತದೆ ಅಂತ ನಾವು ವಿದೇಶ ಪ್ರಯಾಣದ ವಿಷಯದಲ್ಲಿ ನೋಡಿದ್ದೇವೆ. ಪ್ರಯೋಗಮಾಡುವ ಸಮಯಕ್ಕೆ ನವಮಸ್ಥಾನದಲ್ಲಿ ಮೂರು ಪಾಪಗ್ರಹಗಳಿವೆ(ಸೂರ್ಯ, ಬುಧ ಮತ್ತು ಕುಜ). ಈ ಗ್ರಹಗಳಲ್ಲಿ ಕುಜ ನೀಚ ಮತ್ತು ಅಸ್ಥಂಗತನಾಗಿದ್ದಾನೆ, ಬುಧ ವಕ್ರಗಮನದಲ್ಲಿ ಅಸ್ಥಂಗತನಾಗಿದ್ದಾನೆ. ಬುಧನು ಅಷ್ಟಮಾಧಿಪತಿ(ನಷ್ಟ- ವಿಯೋಗಾದಿಪತಿ)ಆಗಿದ್ದಾನೆ. ಅಷ್ಟಮಾದಿಪತಿಯ ಸಂಭಂದ ಯೋಗಿಸುವುದಿಲ್ಲ. ಗುರುಗ್ರಹದ ವಕ್ರದೃಷ್ಠಿ(ಪಂಚಮ-ಅಪಸವ್ಯದೃಷ್ಠಿ) ನವಮಸ್ಥಾನದಮೇಲೆ ಇದೆ. ಹಾಗಾಗಿ ಕೊನೆತನಕ ಯಶಸ್ವಿ ಆಗುತ್ತದೆಯೆನ್ನುವ ವಾತಾವರಣ ಉಂಟುಮಾಡಿತು.
  • ಮತ್ತೊಂದು ವಿಚಾರವೇನೆಂದರೇ ನಾವು ಹೊಸ ವಾಹನವನ್ನು ತೊಗೊಂಡಾಗ ಪೂಜೆ ಮಾಡೀಸುತ್ತೀವಿ. ಮುಹೂರ್ತವನ್ನು ಆಯ್ಕೆಮಾಡುವಾಗ ಚರ ಲಗ್ನವು ಶ್ರೇಷ್ಠ ಅಂತ ತಿಳಿದಿದ್ದೀವಿ. ಚರಲಗ್ನದಲ್ಲಿ ವಾಹನ ನಡೀಸಿದರೇ ವಾಹನ ಉಪಯೋಗಕ್ಕೆ ಬರುತ್ತದೆ, ಅದೇ ಸ್ಥಿರ ಲಗ್ನದಲ್ಲಿ ವಾಹನ ನಡಿಸಿದಾಗ ವಾಹನವನ್ನು ಹೆಚ್ಚು ಉಪಯೋಗಿಸದೆ ಮನೆಗೆ ಪರಿಮಿತವಾಗುತ್ತದೆ ಅಂತ ಮುಹೂರ್ತ ಚಿಂತಾಮಣಿ ತಿಳಿಸುತ್ತದೆ. ಈ ಸಾಮಾನ್ಯಧರ್ಮ Rocket Launching ವಿಷಯದಲ್ಲಿ ಏಕೆ ನೋಡಿಲ್ಲ ಅಂತ ನನಗೆ ಅರ್ಥವಾಗಲಿಲ್ಲ. ವೃಶ್ಚಿಕ ಲಗ್ನ ಸ್ಥಿರ ಲಗ್ನ. ಸ್ಥಿರ ಲಗ್ನದಲ್ಲಿ ಚಂದ್ರಯಾನ್-2 ಪ್ರಯೋಗಿಸಲ್ಪಟ್ಟಿದೆ. ಹಾಗಾಗಿ ಅದು ಪ್ರಯೋಜನಕಾರಿಯಾಗದೆ ಚಂದ್ರನಮೇಲೆ ಸುಮ್ಮನೇ ಕುಳಿತುಕೊಂಡಿದೆ ಯೆನ್ನುವ ವಿಷಯ ಗಮನಕ್ಕೆ ಬಂದಿದೆ.
  • ಮುಖ್ಯವಾದ ವಿಚಾರ ಮತ್ತೊಂದು ಏನಂದರೇ ಉಪಗ್ರಹವನ್ನು ಪ್ರಯೋಗಿಸಲಿರುವ ನಮ್ಮ ವಿಜ್ಞಾನಿಗಳಿಗೆ ಚಂದ್ರನಮೇಲೆ ಯಾವಾಗ ಅದು ಇಳಿಯುತ್ತದೆ ಯೆನ್ನುವ ವಿಚಾರ ಕೂಡಾ ಖಚಿತವಾಗಿ ಗೊತ್ತಿದೆ. ಹಾಗಾಗಿಯೇ ನಮ್ಮ ಪ್ರಧಾನಮಂತ್ರಿಗಳ ಜೊತೆ ವೀಕ್ಷಿಸಲು ಬಹಳಷ್ಟು ವಿದ್ಯಾರ್ಥಿಗಳಿಗೆ ಅವಕಾಶನೀಡಿದ್ದರು. ವಿಜ್ಞಾನಿಗಳು ತಿಳಿಸಿದ ಸಮಯ 07-Sep-2019 ಅರ್ದರಾತ್ರಿ 01:30 AM ರಿಂದ  02:30 AM ಸಮಯದಲ್ಲಿ ಚಂದ್ರನಮೇಲೆ ಇಳಿಯುತ್ತದೆ ಅಂತ.  ಚಂದ್ರನ ಮೇಲೆ ಇಳಿಯುವ ಸಮಯದ ಆಧಾರವಾಗಿ ನಾನು ಗ್ರಹಸ್ಥಿತಿ ಹಾಕಿಕೊಂಡೆ.



  • ಮಿಥುನ ಲಗ್ನ, ಲಗ್ನದಲ್ಲಿ ಪಾಪಗ್ರಹ ರಾಹು ಇದಾನೆ. ಶನಿ ಮತ್ತು ಕೇತುವಿನ ವಕ್ರದೃಷ್ಠಿ ಲಗ್ನದಮೇಲೆ ಇದೆ. ಯಶಸ್ವಿಯನ್ನು ಸೂಚಿಸುವ ದಶಮಾಧಿಪತಿ ಗುರು ಚಂದ್ರನ ಜೊತೆ  ದುಷ್ಟಸ್ಥಾನದಲ್ಲಿದ್ದಾನೆ(ಷಷ್ಟ).
  • ಚಂದ್ರಯಾನ್-2 ಚಂದ್ರನಮೇಲೆ ಇಳಿಯುವ ಸಮಯಕ್ಕೆ (07-09-2019 01:30 AM to 02:30 AM)ಸರಿಯಾಗಿ ಶನಿ-ಬುಧ-ಬುಧ-ಚಂ-ಬುಧ ದಶೆಯು ನಡೆಯುತ್ತಿದೆ. ಶನಿಗ್ರಹ ಸಹಜ ವಿಯೋಗ(ನಷ್ಟ) ಕಾರಕ ಮತ್ತು ಬುಧ ಗ್ರಹ ವಿಯೋಗಾಧಿಪತಿ(ಅಷ್ಟಮಾಧಿಪತಿ). ಉಪಗ್ರಹ ಇಳಿಯುವ ಸಮಯದಲ್ಲಿ ನಷ್ಟವನ್ನು, ವಿಯೋಗವನ್ನು ಸೂಚಿಸುವ ಗ್ರಹಗಳ ಪ್ರಾಭಲ್ಯ ಬಹಳ ಇರುವುದರಿಂದ ಭೂಮಿಗೆ ಚಂದ್ರಯಾನ್-2 ರಿಂದ ವಿಯೋಗವಾಗಿದೆ ಅಂತ ತಿಳಿಯಬಹುದು. ಈ ವಿಷಯವು ಜ್ಯೋತಿಷಶಾಸ್ತ್ರ ಅಧ್ಯಯನ ಮಾಡುವ ಸಾಮಾನ್ಯ ವಿಧ್ಯಾರ್ಥಿಗೂ ಸಹ ಹೊಳೆಯುತ್ತದೆ. ಜಾತಕಪ್ರಕಾರ ವಿದ್ಯೆ, ವಿವಾಹ, ಉದ್ಯೋಗ ಮೊದಲಾದ ಯಾವ ವಿಷಯಗಳಿಗಾದರು ಅಷ್ಟಮ ಸಂಭಂದ ಮತ್ತು ಶನಿಯ ಸಂಭಂದ ಬಂದಾಗ ತೊಂದೆರೆಗೊಳಗಾಗುವ ಅವಕಾಶವಿದೆ ಅಂತ ತಿಳಿದಿದ್ದೀವಿ. ಚಂದ್ರಯಾನು-2 ಕೂಡಾ ಇದೇ ಸೂತ್ರಕ್ಕೆ ವೊಳಗಾಗುತ್ತದೆ ಅಂತ ತಿಳಿತಕ್ಕದ್ದು ಅಂತ ನನ್ನ ಅಭಿಪ್ರಾಯ.
  • ಲಗ್ನದಿಂದ ತೃತೀಯ ಸ್ಥಾನ Communication ಸೂಚಿಸುತ್ತದೆ, ಬುಧನು ಸಹ Communication ಸೂಚನೆಮಾಡುತ್ತಾನೆ. ತೃತೀಯ ಸ್ಥಾನದಲ್ಲಿ ಬುಧ, ಕುಜ ಮತ್ತು ಶುಕ್ರ ಮೂರುಗ್ರಹಗಳು ಅಸ್ಥಂಗತರಾಗಿದ್ದಾರೆ. ಹಾಗಾಗಿ ಚಂದ್ರಯಾನ್-2 ರಿಂದ ಸಂದೇಶ ಪಡೆಯುವ್ದರಲ್ಲಿ ವಿಫಲವಾಗಿದೆ.  ಆದರೇ ಶುಭಗ್ರಹಗಳೂ(ಶು, ಬು) ಸಹಾ ತೃತೀಯ ಸ್ಥಾನದಲ್ಲಿರುವುದು ಮತ್ತು ತೃತೀಯಾಧಿಪತಿ ಬಲಿಷ್ಟನಾಗಿರುವುದರಿಂದ ಚಂದ್ರಯಾನ್-2 ರಿಂದ ಮುಂದೆ ಸಂದೇಶ ಬರುವುದಕ್ಕೂ ಅವಕಾಶವಿದೆ ಅಂತ ತಿಳಿಬಹುದು.
     "ನನಗೆ ಸಂಶಯ ಬಂದಿರುವ ವಿಷಯವೇನೆಂದರೆ ಮೇಲೆ ಚಿಂತನೆ ಮಾಡಿದ ಸಾಮಾನ್ಯ ವಿಚಾರ ಉಪಗ್ರಹಗಳ ಪ್ರಯೋಗಕ್ಕೆ ಮುಹೂರ್ತವಿಡುವ ದೊಡ್ದ ಪಂಡಿತರಿಗೆ ಯೇಕೆ ಗೊತ್ತಾಗಿಲ್ಲ ಅಂತ. ಗೃಹಪ್ರವೇಶ/ವಿವಾಹ ಮೂಹೂರ್ತವನ್ನು ಗಣನೆ ಮಾಡುವಾಗ ಲಗ್ನಾಧಿಪತಿ ಬಲಹೀನವಾಗಿದ್ದರೂ ಅಥವ ದುಷ್ಟಸ್ಥಾನದಲ್ಲಿದ್ದರೂ(6,8,12) ಶುಭ ಆಗುವುದಿಲ್ಲ ಅಂತ ತಿಳಿದು ದೋಷರಹಿತವಾದ ಮುಹೂರ್ತವನ್ನು ಹುಡುಕುತ್ತೀವಿ. ಆದರೇ ಅತ್ಯಂತ ಪ್ರಾಮುಖ್ಯವಾದ, ಹಿರಿಯದಾದ ಉಪಗ್ರಹದ ಪ್ರಯೋಗಕ್ಕೆ ಈ ತಿಳುವಳಿಕೆ ಏನಾಯಿತೋ ನನಗೆ ಅರ್ಥವಾಗಲಿಲ್ಲ.

     ಉಪಗ್ರಹದ ಪ್ರಯೋಗಕ್ಕೆ (Rocket Launching) ಸಹಾ ಮುಹೂರ್ತವನ್ನು ಬಯಸುತ್ತಾರಾ ವಿಜ್ಞಾನಿಗಳು ಅಂತ ಬಹಳ ಜನರಿಗೆ ಸಂಶಯಬರಬಹುದು. ಆದರೆ ಇದು ನಡೆಯುತ್ತದೆ ಆದರೆ ಯಾರು ಈ ಮುಹೂರ್ತವಿಡುತ್ತಾರೊ ತಿಳಿಸುವುದಿಲ್ಲ ಅಷ್ಟೇ.

     ಇದು ನನ್ನ ವ್ಯಕ್ತಿಗತವಾದ ಅಭಿಪ್ರಾಯ ಮತ್ತು ಈ ಪೋಸ್ಟ್ ಕೇವಲ ಜ್ಯೋತಿಷಶಾಸ್ತ್ರದ ದೃಷ್ಟಿಯಲ್ಲಿ ಮಾತ್ರ ನೋಡಲಾಗಿದೆ/ಹಾಕಲಾಗಿದೆ. ಯಾರನ್ನೂ ನೋವಿಸುವ ಪ್ರಯತ್ನವಲ್ಲ ಅಂತ ಗ್ರಹಿಸಬೇಕು.  ಚಂದ್ರಯಾನ -2 ಪ್ರಯೋಗದಲ್ಲಿ ಫಾಲ್ಗೊಂಡ ಎಲ್ಲ ವಿಜ್ಞಾನಿಗಳಿಗೂ ಮನಃಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ. ಧನ್ಯವಾದಗಳು


ಶ್ರೀಕೃಷ್ಣಾರ್ಪಣಮಸ್ತು

“ನನ್ನ ಮಗಳ ಮದುವೆ ಯಾವಾಗ ಆಗುತ್ತದೆ…?”

     ಕಳದ ಶನಿವಾರ ಬೆಂಗಳೂರಿನಿಂದ ಒಬ್ಬ ತಾಯಿ ತನ್ನ ಮಗಳ ಮದುವೆಗಾಗಿ ಜಾತಕವನ್ನು ತೋರಿಸುವುದಕ್ಕೆ ಬಂದಿದ್ದರು. ತಾಯಿ: “ನನ್ನ ಮಗಳು ಭಾರತದಲ್ಲಿ BE...